ಮೇಲಂತಬೆಟ್ಟು ಭಗವತಿ ದೇವಸ್ಥಾನ ರಸ್ತೆಗೆ ಹಾಕಿದ್ದ ಬೇಲಿ ತೆರವು

Suddi Udaya


ಬೆಳ್ತಂಗಡಿ: ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಸಂಪರ್ಕ ರಸ್ತೆಗೆ ಏಕಾಏಕಿ ಹಾಕಲಾಗಿರುವ ಬೇಲಿಯನ್ನು ಪೊಲೀಸರು ಹಾಗೂ ಮೇಲಂತಬೆಟ್ಟು ಗ್ರಾ.ಪಂ.ನ ಪ್ರಮುಖರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.
ಮೇಲಂತಬೆಟ್ಟು ದೇವಸ್ಥಾನದಲ್ಲಿ ಎ. ೩ರಿಂದ ೭ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಸಂಬಂಧ ಸಂಪರ್ಕ ರಸ್ತೆಯನ್ನು ನಿನ್ನೆ ಅಗಲೀಕರಣಗೊಳಿಸುವ ಕೆಲಸ ಆರಂಭಿಸಿದಾಗ, ಇದು ತಮಗೆ ಸೇರಿದ ಜಾಗ ಎಂದು ಹೇಳಿ ರಸ್ತೆ ಅಭಿವೃದ್ಧಿಗೆ ಸ್ಥಳೀಯರಾದ ಸಚಿನ್ ನೂಜೋಡಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ತಡರಾತ್ರಿ ಬೇಲಿ ಹಾಕಿ ಬಂದ್ ಮಾಡಿದ್ದರು. ಏಕಾಏಕಿ ರಸ್ತೆಯನ್ನು ಬಂದ್ ಮಾಡಿದ್ದರಿಂದ ಭಕ್ತರಿಗೆ ಸಮಸ್ಯೆಯಾಗಿದ್ದು, ಸಂಜೆ
ಪೊಲೀಸರು ಹಾಗೂ ಪಂಚಾಯತ್‌ರವರ ಸಮ್ಮುಖದಲ್ಲಿ ಬೇಲಿಯನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.

Leave a Comment

error: Content is protected !!