ಮುಂಡಾಜೆ ಹಾ.ಉ. ಸ. ಸಂಘದ ಕಾರ್‍ಯದರ್ಶಿ ದಿ| ಅಶೋಕ್ ಕುಮಾರ್ ರಿಗೆ ಶ್ರದ್ಧಾಂಜಲಿ ಸಭೆ

Suddi Udaya

ಮುಂಡಾಜೆ : ಅಪಘಾತದಲ್ಲಿ ಮೃತಪಟ್ಟ ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್‍ಯದರ್ಶಿ ಹಾಗೂ ರಾಸುಗಳ ಕೃತಕ ಗರ್ಭದಾರಣ ಕಾರ್ಯಕರ್ತರಾದ ಅಶೋಕ್ ಕುಮಾರ್ ರವರಿಗೆ ಎಲ್.ಡಿ ಬ್ಯಾಂಕ್ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ದ.ಕ ಹಾಲು ಒಕ್ಕೂಟದ ನಿರ್ದೇಶಕ ಬಿ ನಿರಂಜನ್ ಬಾವಂತಬೆಟ್ಟು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ದ. ಕ ಹಾಲು ಒಕ್ಕೂಟ ಪದ್ಮನಾಭ ಶೆಟ್ಟಿ ಅರ್ಕಜೆ, ಮುಂಡಾಜೆ ಹಾಲು ಉತ್ಪಾದಕರ ಸ. ಸಂಘದ ಅಧ್ಯಕ್ಷ ಅನಂತು ಮಚ್ಚಿಮಲೆ , ದ.ಕ ಹಾಲು ಒಕ್ಕೂಟ ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ದ.ಕ ಹಾಲು ಒಕ್ಕೂಟ ಉಪವ್ಯವಸ್ಥಾಪಕ ಚಂದ್ರಶೇಖರ್, ಡಾ. ಗಣಪತಿ , ಡಾ ಪೂಜಾ, ವಿಸ್ತರಣಾಧಿಕಾರಿಗಳಾದ ಶ್ರೀಮತಿ ಸುಚಿತ್ರ, ಯಮುನ ಭಾಗವಹಿಸಿದ್ದರು.

ದ.ಕ ಜಿಲ್ಲಾ ನೌಕರರ ಅಧ್ಯಕ್ಷ ಬಿ ಮಹಮ್ಮದ್‌ ಷರೀಫ್‌ ಸ್ವಾಗತಿಸಿ, ಜಯರಾಜ ತಣ್ಣೀರುಪಂತ ಧನ್ಯವಾದವಿತ್ತರು. ಮೇಬಲ್‌ ಕ್ರಾಸ್ತ ನಿರೂಪಿಸಿದರು. ತಾಲೂಕಿನ ಎಲ್ಲಾ ಸಂಘದ ಕಾರ್ಯದರ್ಶಿಗಳು , ಸಿಬ್ಬಂದಿಗಳು ಹಾಜರಿದ್ದರು.

Leave a Comment

error: Content is protected !!