ಲಯನ್ಸ್ ಸಂಸ್ಥೆ ವತಿಯಿಂದ ಆರ್ಥಿಕ ನೆರವು

Suddi Udaya

ಬೆಳ್ತಂಗಡಿ : ಲಯನ್ಸ್ ಜಿಲ್ಲೆ 317 ಡಿ ಯ ಪ್ರಾಂತ್ಯ 5ರ ಲಯನ್ಸ್ ಕ್ಲಬ್ ಮುಚ್ಚುರು ನೀರುಡೆ ವತಿಯಿಂದ ಬೆಳ್ತಂಗಡಿ ಲಾಯಿಲದಲ್ಲಿರುವ ದಯಾಳ್ ಬಾಗ್ ಸಂಸ್ಥೆಯ ದಯಾ ವಿಶೇಷ ಶಾಲೆಗೆ ರೂ.25000 ಆರ್ಥಿಕ ಸಹಾಯಧನವನ್ನು ಪ್ರಾಂತೀಯ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ಧಾರವರು ಫಾ. ವಿನೋದ್ ಮಾಸ್ಕರೆನ್ಹಸ್ ಇವರಿಗೆ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ತುಕಾರಾಮ್ ಬಿ. ಉಪಸ್ಥಿತರಿದ್ದರು. ಸ್ಟಾನಿ ಮಿರಂಡಾ ಅಧ್ಯಕ್ಷರಾಗಿರುವ ಲಯನ್ಸ್ ಕ್ಲಬ್ ಮುಚ್ಚುರು ನೀರುಡೆ ವತಿಯಿಂದ ಈ ವರ್ಷ ಸುಮಾರು 30 ಲಕ್ಷ ವೆಚ್ಚದ ಸೇವಾಕಾರ್ಯಗಳು ಜರಗಿದೆ. ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿಯವರ ನಾಯಕತ್ವದಡಿ ಲಯನ್ಸ್ ಸದಸ್ಯರಿಂದ ಹಲವು ಸಮಾಜಮುಖಿ ಕೆಲಸಗಳು ಸಂಪನ್ನಗೊಳ್ಳುತ್ತಿದೆ.

Leave a Comment

error: Content is protected !!