ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕೆ. ಸೋಮ ವಿಧಿವಶ

Suddi Udaya

ಬೆಳ್ತಂಗಡಿ: ಮುಂಡೂರು ನಿವಾಸಿ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕೆ.ಸೋಮ (71ವ) ಇವರು ಜೂ.15ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೆ.ಸ್ಥಾಪಿತ )ಇದರ ಮಾಜಿ ತಾಲೂಕು ಸಂಚಾಲಕರಾಗಿ, ದಲಿತ ಚಳುವಳಿಯ ನೇತಾರಾಗಿ ಸೇವೆ ಸಲ್ಲಿಸಿದರು.
ಮೃತರು ಪತ್ನಿ, ಪುತ್ರರು, ಪುತ್ರಿಯರು ಬಂಧು, ವಗ೯ದವರನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರವು ಮುಂಡೂರಿನ ಕೋಟಿಕಟ್ಟೆ ಮನೆಯಲ್ಲಿ ಇಂದು ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬ ಸ್ಥರು ತಿಳಿಸಿದ್ದಾರೆ.

Leave a Comment

error: Content is protected !!