ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವ್ಹೀಲ್ ಚೇರ್ ಕೊಡುಗೆ

Suddi Udaya

Updated on:

ಬೆಳ್ತಂಗಡಿ : ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವ್ಹೀಲ್ ಚೇರ್ ನ್ನು ಬಂಟ್ವಾಳ ಸಜಿಪನಾಡು ಚಂದಪ್ಪ ಟಕ್ಯು ರವರಿಗೆ ಸೇವಾಧಾಮ ಕೊಕ್ಕಡದಲ್ಲಿ ಹಸ್ತಾಂತರಿಸಲಾಯಿತು.

ತೆಂಗಿನ ಮರದಿಂದ ಬಿದ್ದ ಕಾರಣ ಫಲಾನುಭವಿ ನಡೆಯಲು ಸಾಧ್ಯವಾಗದ ಕಾರಣ ಮತ್ತು ಸುಮಾರು ರೂ.15ಸಾವಿರ ಮೌಲ್ಯದ ವೀಲ್ ಚೇರ್ ನೀಡಲಾಯಿತು.

ಸೇವಾಧಾಮದ ಸಂಚಾಲಕ ವಿನಾಯಕ್ ರಾವ್ ಕನ್ಯಾಡಿ ಅವರ ಜನ್ಮದಿನದ ಪ್ರಯುಕ್ತ ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರಾಯೋಜಕತ್ವರಾದ ಅಧ್ಯಕ್ಷ ರೋ. ಅನಂತ ಭಟ್ ಅವರಿಗೆ ವಿಶೇಷ ಧನ್ಯವಾದವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರೋ. ಜಯಕುಮಾರ್ ಶೆಟ್ಟಿ, ರೋ. ಅರುಣ್ ಕುಮಾರ್, ಶರತ್ ಕೃಷ್ಣ ಪಡ್ವೆಟ್ನಾಯ, ರೋ. ವಿಶ್ವಜಿತ್ ಉಪಸ್ಥಿತರಿದ್ದರು.

Leave a Comment

error: Content is protected !!