ಮದ್ದಡ್ಕ ಸಮೃದ್ಧಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

Suddi Udaya

ಮದ್ದಡ್ಕ: ಸಮೃದ್ಧಿ ಮದ್ದಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಸೆ.7ರಂದು ಕುಲಾಲ ಮಂದಿರ ಗುರುವಾಯನಕೆರೆ ಸಭಾಭವನದಲ್ಲಿ ಜರಗಿತು.

ಮದ್ದಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ದ.ಕ ಹಾಲು ಒಕ್ಕೂಟ ಬೆಳ್ತಂಗಡಿ ವಿಸ್ತರಣಾಧಿಕಾರಿ ರಾಜೇಶ್ ಬಿ ಕಾಮತ್ ಮತ್ತು ಡಾ.ಸತೀಶ್, ಪಶು ವೈದ್ಯಾಧಿಕಾರಿ ಕೆಎಂಎಫ್ ಡಾ.ಪೂಜಾ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪೂವಪ್ಪ ಭಂಡಾರಿ, ನಿರ್ದೇಶಕರಾದ ಅಣ್ಣಿಶೆಟ್ಟಿ, ಚಿದಾನಂದ ಕೆ.ಪಿ., ರಮೇಶ್ ಸಾಲಿಯಾನ್, ವಿನೋದ ಶೆಟ್ಟಿ. ಕೃಷ್ಣಪ್ಪ, ರೊನಾಲ್ಡ್ ಸಿಕ್ಷೇರಾ, ವಿವೇಕಾನಂದ ಸಾಲಿಯಾನ್, ಮೋಹನ, ಗಿರಿಜಾ, ಭಾರತಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಪವಿತ್ರ ಲೆಕ್ಕ ಪತ್ರ ಮಂಡಿಸಿ, ನಿರ್ದೇಶಕ ಹೇಮಂತ್ ಸ್ವಾಗತಿಸಿದರು.

Leave a Comment

error: Content is protected !!