April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮುಂಡೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ನೂತನ ಯುವಕ ಮಂಡಲಕ್ಕೆ ಚಾಲನೆ, ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

ಬಂದಾರು : ಬಂದಾರು ಗ್ರಾಮದ ಮುಂಡೂರು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ,ನೂತನವಾಗಿ ರಚನೆಗೊಂಡಿರುವ ಚಾಮುಂಡೇಶ್ವರಿ ಯುವಕ ಮಂಡಲ ಸಂಘಕ್ಕೆ ಚಾಲನೆ, ಹಾಗೂ ಬಡ ಕುಟುಂಬ ಉಷಾ ವಿಶ್ವನಾಥ ಬಜಿಲ ಮನೆಯವರಿಗೆ ಆಹಾರ ಕಿಟ್ ಸೆ. 6 ರಂದು ವಿತರಿಸಲಾಯಿತು.


ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಆನಂದ ಗೌಡ ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ ಬಂದಾರು ಗ್ರಾಮ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಇವರು ಕಾರ್ಯಕ್ರಮಕೆ ಶುಭಕೋರಿದರು.

ವೇದಿಕೆಯಲ್ಲಿ ಗಿರೀಶ್ ಗೌಡ ಬಿ.ಕೆ ಕುಂಬುಡoಗೆ, ಚಾಮುಂಡೇಶ್ವರಿ ಯುವಕ ಮಂಡಲದ ಅಧ್ಯಕ್ಷರಾದ ಅಶ್ವಥ್ ಗೌಡ, ಅಕ್ಷಯ ಗೌಡ,ಶ್ರೀಮತಿ ಧರ್ಣಮ್ಮ ಸುಬ್ಬಣ್ಣ ಗೌಡ, ನಾರಾಯಣ ಗೌಡ ಮುಂಡೂರು, ಯುವಕ ಮಂಡಲದ ಪದಾಧಿಕಾರಿಗಳು,ಸದಸ್ಯರು, ಭಕ್ತಾಭಿಮಾನಿಗಳು, ಮನೆಯವರು ಉಪಸ್ಥಿತರಿದ್ದರು.

ವಿವಿಧ ಆಟೋಟ ಸ್ಪರ್ಧೆಗಳು,ಕಡುಬಡತನದ ಮನೆಗೆ ಆಹಾರ ವಿತರಣೆ ಕಾರ್ಯಕ್ರಮ, ಅನ್ನದಾನ ಸೇವೆ, ರಾತ್ರಿ ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ. ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು.

Related posts

ನಾಲ್ಕೂರು: ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ: ಪುಟಾಣಿ ಮಕ್ಕಳು ಪ್ರೀತಿಯ ಗುರುಗಳಿಗೆ ಪೆನ್ನು,ಹೂ ನೀಡಿ ಗೌರವ ಸಲ್ಲಿಕೆ

Suddi Udaya

ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಚ್ಛ ಕಿಲ್ಲೂರು ಅಭಿಯಾನ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya

ಕುವೆಟ್ಟು: ಅಪಘಾತವಾಗಿದ್ದ ವಿಠಲ ಶೆಟ್ಟಿರವರು ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಪಟ್ರಮೆ : ಪುರುಷೋತ್ತಮ ದಾಸ್ ಹೃದಯಾಘಾತದಿಂದ ನಿಧನ

Suddi Udaya

ಅ.29: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!