ನ್ಯಾಯತರ್ಪು: ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

Suddi Udaya

ನ್ಯಾಯತರ್ಪು : ನಾಳ ಅಂಗನವಾಡಿ ಕೇಂದ್ರದ ವತಿಯಿಂದ ಗ್ರಾಮ ಪಂಚಾಯತ್ ಕಳಿಯ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪೌಷ್ಟಿಕ ಆಹಾರ ಸಪ್ತಹ ಕಾರ್ಯಕ್ರಮ ನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಪಾಲತರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸುಧಾಕರ ಮಜಲು, ವಲಯ ಮೇಲ್ವಿಚಾರಕಿ ಶ್ರೀಮತಿ ನಂದನ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಪೂಜಾರಿ ನಾಳ, ಸೋಮಪ್ಪ ಗೌಡ ಕುಬಾಯ, ಅಶೋಕ್ ರಾಯಿಮಾರು, ಶ್ರೀಮತಿ ಸೌಭಾಗ್ಯ ರಾಜೇಶ್ ಪಿಜಿನುಕ್ಕು, ಶ್ರೀಮತಿ ರೀತ ಚಂದ್ರಶೇಖರ್, ಆಶಾ ಕಾರ್ಯಕರ್ತ ಶ್ರೀಮತಿ ಶಶಿಕಲಾ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತ ಶ್ರೀಮತಿ ನಾಗವೇಣಿ ರಕ್ತೇಶ್ವರಿ ಪದವು ಮತ್ತು ಹಿರಿಯ ನಾಗರಿಕರಾದ ಶ್ರೀಮತಿ ಅಲಿ ಮಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಳ ಅಂಗನವಾಡಿ ಕಾರ್ಯ ವ್ಯಾಪ್ತಿಯ ಮಕ್ಕಳ ಪೋಷಕರು ಸ್ತ್ರೀ ಶಕ್ತಿ ಪದಾಧಿಕಾರಿಗಳು ಉಪಸ್ಥಿತರಿದ್ದು ಪೌಷ್ಟಿಕಾಂಶ ಆಹಾರದ ಬಗ್ಗೆ ವಲಯ ಮೇಲ್ವಿಚಾರಕಿ ಶ್ರೀಮತಿ ನಂದನ ಮಾಹಿತಿ ನೀಡಿದರು. ಮಕ್ಕಳ ತಾಯಂದಿರು, ಸ್ತ್ರೀಶಕ್ತಿ ಸದಸ್ಯರು ವಿವಿಧ ಬಗೆಯ ಪೌಷ್ಟಿಕ ಆಹಾರ ತಯಾರಿಸಿ ತಂದಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತ ಶ್ರೀಮತಿ ಶಶಿಕಲಾ, ಶ್ರೀಮತಿ ನವೀನ ಕುಮಾರಿ ಸಹಾಯಕಿ ಶ್ರೀಮತಿ ಮೋಹಿನಿ ಸಹಕರಿಸಿದರು. ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಶಶಿಕಲ ಇವರು ಅತಿಥಿಗಳನು ಸ್ವಾಗತಿಸಿ ಕೊನೆಯದಾಗಿ ಧನ್ಯವಾದ ಮಾಡಿದರು.

Leave a Comment

error: Content is protected !!