ಬೆಳ್ತಂಗಡಿ ರೋಟರಿ ಕ್ಲಬ್ ನ ವತಿಯಿಂದ ವೈದ್ಯಕೀಯ ನೆರವು

Suddi Udaya

ಮಿತ್ತಬಾಗಿಲು ಗ್ರಾಮದ ಕುಕ್ಕಾವು ಸಮೀಪ ಪಿಲತ್ತಡಿ ಎಂಬಲ್ಲಿ ಮರದಿಂದ ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡಿರುವ ಜನಾರ್ಧನ ಗೌಡರಿಗೆ ರೂ 16 ಸಾವಿರ ಮೊತ್ತದ ವಿಶೇಷ ಮಂಚ ಹಾಗೂ ರೂ 11,000/- ಧನ ಸಹಾಯವನ್ನು ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ರೊ. ಮೇಜರ್ ಜನರಲ್ ಎಮ್.ವಿ ಭಟ್ , ರೊ.ಡಾ। ಗೋಪಾಲಕೃಷ್ಣ ಭಟ್, ರೊ. ವಿದ್ಯಾಕುಮಾರ್ ಕಾಂಚೋಡು ಮತ್ತು ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್, ಸಮಾಜ ಸೇವಕರಾದ ಕಕ್ಕನೇಜಿ ವಾಸುದೇವ ಭಟ್ ಉಪಸ್ಥಿತರಿದ್ದರು.

Leave a Comment

error: Content is protected !!