March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೋಟರಿ ಬೆಂಗಳೂರು ಇಂದಿರಾನಗರ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸೇವಾ ಟ್ರಸ್ಟ್ ಇದರ ವತಿಯಿಂದ ತಾಲೂಕಿನ ಬಡಕುಟುಂಬದ ಪ್ರತಿಭಾನ್ವಿತ 145 ವಿದ್ಯಾರ್ಥಿಗಳಿಗೆ ರೂ.10.26 ಲಕ್ಷ ವಿದ್ಯಾರ್ಥಿ ವೇತನ ವಿತರಣೆ

ಬೆಳ್ತಂಗಡಿ : ರೋಟರಿ ಬೆಂಗಳೂರು ಇಂದಿರಾನಗರ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸೇವಾ ಟ್ರಸ್ಟ್ ಇದರ ವತಿಯಿಂದ ತಾಲೂಕಿನ ಪ್ರತಿಭಾನ್ವಿತ 145 ವಿದ್ಯಾರ್ಥಿಗಳಿಗೆ ರೂ.10.26 ಲಕ್ಷ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಸೆ.30 ರಂದು ರೋಟರಿ ಸೇವಾ ಭವನ, ಅರಳಿ ರಸ್ತೆ, ಕಾಶಿಬೆಟ್ಟುವಿನಲ್ಲಿ ಜರುಗಿತು.


ಮುಖ್ಯ ಅತಿಥಿಗಳಾಗಿ ರೊ. ಕೃಷ್ಣ ಶೆಟ್ಟಿ ಕೆ., ಪಿಡಿಜಿ ಮತ್ತು ಜಿಲ್ಲಾ ಸಲಹೆಗಾರ, ARRFC, ವಿಧಾನ ಪರಿಷತ್ ಶಾಸಕ ರೊ. ಕೆ.ಪ್ರತಾಪಸಿಂಹ ನಾಯಕ್, ಪಡ್ವೆಟ್ನಾಯ ಫ್ಯಾಮಿಲಿ ಟ್ರಸ್ಟ್ ಉಜಿರೆ ಟ್ರಸ್ಟಿ, ಶ್ರೀಧರ ಪಡ್ವೆಟ್ನಾಯ, ರೊ. ರಂಜಿತ್ ಸಿಂಗ್ ಗುಲಾಟಿ, ಮಾಜಿ ಅಧ್ಯಕ್ಷರು, ರೋಟರಿ ಬೆಂಗಳೂರು ಇಂದಿರಾನಗರ, ಡಾ. ಎನ್. ಕೃಷ್ಣನ್ ಮೆನನ್, ಮಾಜಿ ಅಧ್ಯಕ್ಷ ರೋಟರಿ ಬೆಂಗಳೂರು ಇಂದಿರಾನಗರ, ರೊ. ಜಗದೀಶ್ ಎಂ., ನಿಕಟಪೂರ್ವ ಅಧ್ಯಕ್ಷ ರೋಟರಿ ಬೆಂಗಳೂರು, ಇಂದಿರಾನಗರ, ರೊ. ಯಶವಂತ್ ಪಟವರ್ಧನ್, ವಲಯ ಸೇನಾನಿ, ರೊ. ಡಾ. ಜಯ ಕುಮಾರ್ ಶೆಟ್ಟಿ, ಜಿಲ್ಲೆ. ಅಧ್ಯಕ್ಷರು, ಮೂಲ ಶಿಕ್ಷಣ ಮತ್ತು ಸಾಕ್ಷರತೆ, ರೊ. ಡಿ.ಎಂ.ಗೌಡ, ಕಾಯ೯ಕ್ರಮ ಸಂಯೋಜಕರು ರೋಟರಿ ಕ್ಲಬ್ ಬೆಳ್ತಂಗಡಿ, ರೊ. ಎನ್.ಬಾಲಕೃಷ್ಣನ್ ಅಧ್ಯಕ್ಷರು, ರೋಟರಿ ಬೆಂಗಳೂರು ಇಂದಿರಾನಗರ, ರೊ.ಎನ್. ಗೋಪಿನಾಥ್ ಕಾರ್ಯದರ್ಶಿ, ರೋಟರಿ ಬೆಂಗಳೂರು ಇಂದಿರಾನಗರ , ರೊ.ಮೇಜನರಲ್ (ನಿವೃತ್ತ) ಎಂ.ವಿ ಭಟ್, ಆನ್ಸ್ ಕ್ಲಬ್ ಅಧ್ಯಕ್ಷೆ ಅನಿತಾ ದಯಾಕರ್, ಬೆಳ್ತಂಗಡಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಸುಕುಮಾರ್ ಉಪಸ್ಥಿತರಿದ್ದರು.


ರೊ. ಅನಂತ ಭಟ್ ಮಚ್ಚಿಮಲೆ ಅಧ್ಯಕ್ಷರು, ರೋಟರಿ ಕ್ಲಬ್ ಬೆಳ್ತಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೊ. ಧನಂಜಯ ರಾವ್ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು. ರೊ.ವಿದ್ಯಾ ಕುಮಾರ್ ಕಾಂಚೋಡು ಕಾರ್ಯದರ್ಶಿ, ರೋಟರಿ ಕ್ಲಬ್ ಬೆಳ್ತಂಗಡಿ ಧನ್ಯವಾದವಿತ್ತರು.

Related posts

ಬಳಂಜ ಶ್ರೀ ಪಂಚಲಿಂಗೇಶ್ವರ ದೇವರಿಗೆ ಪಲ್ಲಕ್ಕಿ ಸಮರ್ಪಣೆ

Suddi Udaya

ವೇಣೂರು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಆಂತರಿಕ ಗುಣಮಟ್ಟದ ಭರವಸೆ ಕೋಶ ವಾಣಿಜ್ಯ ಮತ್ತು ಹೂಡಿಕೆದಾರರ ಜಾಗೃತಿ ಕಾರ್ಯಾಗಾರ

Suddi Udaya

ಗೇರುಕಟ್ಟೆ ಜವಳಿ ಉದ್ಯಮಿ ಸತೀಶ್ ಕುಮಾರ್ ಬಿ. ನಿಧನ

Suddi Udaya

ವೇಣೂರು ಕಾರು ಚಾಲಕ ಬೈರಣ್ಣ ನಿಧನ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ವತಿಯಿಂದ ಕೊಕ್ಕಡ ಗ್ರಾಮದ ಬೂತ್ ಪ್ರಗತಿ ಸಭೆ

Suddi Udaya
error: Content is protected !!