ಸೋಮಂತಡ್ಕ ಟಿಪ್ಪರ್ ಪಲ್ಟಿ

Suddi Udaya

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕದ ಅರಣ್ಯ ಇಲಾಖೆಯ ವಸತಿಗೃಹಗಳ ಸಮೀಪ, ರಸ್ತೆ ಬದಿ ಟಿಪ್ಪರ್ ವಾಹನ ಪಲ್ಟಿಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ಮಣ್ಣು ಸಾಗಾಟ ನಡೆಸುತ್ತಿದ್ದ ಟಿಪ್ಪರ್, ಮಣ್ಣನ್ನು ರಸ್ತೆ ಬದಿ ಸುರಿಯುತ್ತಿದ್ದಾಗ ಮಣ್ಣು ಒಂದೇ ಬದಿಗೆ ಸರಿದ ಕಾರಣ ರಸ್ತೆ ಬದಿಯ ಚರಂಡಿಗೆ ಜಾರಿ ಪಲ್ಟಿಯಾಯಿತು. ಟಿಪ್ಪರ್ ವಾಹನದಲ್ಲಿ ಚಾಲಕ ಮಾತ್ರ ಇದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

Leave a Comment

error: Content is protected !!