ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 12ನೇ ಸಹಾಯಧನ ಹಸ್ತಾಂತರ

Suddi Udaya

ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ಕ್ಷೇಮ ನಿಧಿಯ 12ನೇ ಸಹಾಯಧನವನ್ನು ಆಟೋ ಚಾಲಕರು ಮಾಲಕರ ಸಂಘ ನಾರಾವಿ ಇದರ ಅಧ್ಯಕ್ಷರಾದ ರವಿ ಸಾಲಿಯಾನ್ ನಾರಾವಿ ಇವರ ಹೃದಯದ ಸಮಸ್ಯೆಯಿಂದ ಮಂಗಳೂರು ತಾರ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆದ ಇವರಿಗೆ ರೂ 5000/ವನ್ನು ಸಂಘ ದ ಗೌರವ ಅಧ್ಯಕ್ಷರಾದ ಆಣ್ಣಾಜೆ ಪೂಜಾರಿ ನಾರಾವಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ದಿನೇಶ್ ದೇವಾಡಿಗ ನಾರಾವಿ, ಸದಸ್ಯರಾದ ವೀರಯ್ಯ ಪೂಜಾರಿ ನಾರಾವಿ, ಚಂದ್ರ ಪೂಜಾರಿ ನಾರಾವಿ, ಲಾರೆನ್ಸ್ ಡಿ.ಸೋಜ, ಚಂದ್ರ ಶೇಖರ್ ಪೂಜಾರಿ ನಾರಾವಿ, ಸಂತೋಷ ಹೆಗ್ಡೆ ನಾರಾವಿ ಉಪಸ್ಥಿತರಿದ್ದರು.

Leave a Comment

error: Content is protected !!