ಯಾವುದೇ ದಾಖಲಾತಿ ಇಲ್ಲದೆ ಅಕ್ರಮ ಮರಳು ಸಾಗಟ: ಪತ್ತೆ

Suddi Udaya

ಬೆಳ್ತಂಗಡಿ: ಯಾವುದೇ ದಾಖಲಾತಿ ಇಲ್ಲದೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು
ಬೆಳ್ತಂಗಡಿ ಪೊಲೀಸರು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಪತ್ತೆ ಹಚ್ಚಿದ್ದು, ಆರೋಪಿಗಳು ಪರಾರಿಯಾದ ಘಟನೆ ಡಿ.27 ರಂದು ನಡೆದಿದೆ.

ಬೆಳ್ತಂಗಡಿ‌ ಪೊಲೀಸ್ ಉಪನಿರೀಕ್ಷಕರಾದ ಧನರಾಜ್‌ ಟಿ ಎಂ ಹಾಗೂ ಸಿಬ್ಬಂದಿಗಳು ಲಾರಿಯನ್ನು ತಡೆದಾಗ, ಲಾರಿ ಚಾಲಕ ರಂಜಿತ್‌ ಹಾಗೂ ರಾಧಾಕೃಷ್ಣ ಎಂಬವರು ಲಾರಿಯನ್ನು ನಿಲ್ಲಿಸಿ ಸ್ಥಳದಿಂದ ಓಡಿಹೋಗಿದ್ದು, ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ ಯಾವುದೇ ದಾಖಲಾತಿ ಇಲ್ಲದೆ ಎಲ್ಲಿಂದಲೋ ರೂ 15.000/- ಬೆಲೆ ಬಾಳುವ ಮರಳನ್ನು ಕಳವು ಮಾಡಿ ಲಾರಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡಿರುವುದು ಕಂಡುಬಂದಿರುತ್ತದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ. ನಂ: 122/2023 ಕಲಂ:379 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Comment

error: Content is protected !!