March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿವೃತ್ತ ಯೋಧ ಫ್ರಾನ್ಸಿಸ್ ರವರಿಗೆ ಉಜಿರೆ ಕೆಎಸ್ಎಂಸಿಎ ಸಂಘಟನೆ ಮತ್ತು ಊರ ಗಣ್ಯರಿಂದ ಭವ್ಯ ಸ್ವಾಗತ

ಉಜಿರೆ : ಧರ್ಮಸ್ಥಳ ನೇರ್ತನೆ ನಿವಾಸಿಯಾದ ಪ್ರಸ್ತುತ ಸೋಮಂತ್ತಡ್ಕದಲ್ಲಿ ನೆಲೆಸಿರುವ ಫ್ರಾನ್ಸಿಸ್ ಜೆ ಅವರು ಸೇನೆಯಲ್ಲಿ 22 ವರ್ಷ ಕರ್ತವ್ಯ ನಿರ್ವಹಿಸಿ ಡಿ 31ರಂದು ಸೇವಾ ನಿವೃತ್ತರಾಗಿ ಊರಿಗೆ ಆಗಮಿಸಿದ ಫ್ರಾನ್ಸಿಸ್ ಜೆ ರವರನ್ನು ಪತ್ನಿ ಬೀನಾ ಫ್ರಾನ್ಸಿಸ್, ಮಕ್ಕಳಾದ ಫಿಯಾ, ಫೆಬಿನ್ ಅನ್ವಿರೋಸ್ ರವರೊಂದಿಗೆ ಉಜಿರೆಯಲ್ಲಿ ಸ್ವಾಗತ ಸ್ವೀಕರಿಸಿದರು.

ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಯ ನಿರ್ದೇಶಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಧರ್ಮಗುರುಗಳು ವಂದನಿಯ ಫಾ. ಶಾಜಿ ಮಾತ್ಯು ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿ, ನಿವೃತ್ತ ಬದುಕು ಸಮಾಜ ಸೇವೆಯ ಬದುಕಾಗಲಿ ಎಂದು ಶುಭ ಕೋರಿದರು. ಕೆ ಎಸ್ ಎಂ ಸಿ ಎ ಮುಖಂಡ ಜೈಸನ್ ಪಟ್ಟೆರಿ ಸಹ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್ , ಉದ್ಯಮಿ ರವಿ ಚಕ್ಕಿತ್ತಾಯ, ಸಚಿನ್ ಬಿಡೆ, ಕೆಎಸ್ಎಂಸಿಎ ಕೇಂದ್ರ ಸಮಿತಿ ಪಿಆರ್ ಒ ಸೆಬಾಸ್ಟಿಯನ್ ಪಿ ಸಿ, ಕೆ ಎಸ್ ಎಂ ಸಿ ಎ ಉಜಿರೆ ಘಟಕ ಅಧ್ಯಕ್ಷರಾದ ಜೋಬಿ ಮುಳವನ, ಡನಿಷ್, ಡೇವಿಸ್ ಮತ್ತು ಊರವರು ಉಪಸ್ಥಿತರಿದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂಸ್ಕೃತೋತ್ಸವ

Suddi Udaya

ಉಜಿರೆ ಟಿ.ಬಿ ಕ್ರಾಸ್ ಬಳಿ ಚರಂಡಿಗೆ ಉರುಳಿದ ಪಿಕಪ್

Suddi Udaya

ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಕ್ಯಾಲೆಂಡರ್ ಬಿಡುಗಡೆ

Suddi Udaya

ಚಾರ್ಮಾಡಿ ತ್ರಿವರ್ಣ ಸಂಜೀವಿನಿ ಮಹಿಳಾ ಒಕ್ಕೂಟದ ಮಾಸಿಕ ಸಭೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ತಡೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ವಾಟರ್ ಬೆಡ್ ವಿತರಣೆ

Suddi Udaya
error: Content is protected !!