ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ, ವೀರಕೇಸರಿ ಹಿಂದೂಪುರ ಸಂಘಟನೆಯಿಂದ ಬಳಂಜ ಪೇಟೆಯಲ್ಲಿ ಶ್ರೀರಾಮದೇವರ ಶೃಂಗಾರ ಮಂಟಪ

Suddi Udaya

ಬಳಂಜ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನೆ ದಿನ ಗಣನೆ ಶುರುವಾಗಿದ್ದು ಇದರೊಂದಿಗೆ ಅದೆಷ್ಟೋ ವರ್ಷಗಳ ಕನಸು ನನಸಾಗುವ ಕಾಲ ಬಂದೊದಗಿದೆ, ರಾಮ ಮಂದಿರದ ಉದ್ಘಾಟನೆಗೆ ಕೇವಲ ಅಯೋಧ್ಯೆ ಮಾತ್ರವಲ್ಲದೆ ಇಡೀ ದೇಶ, ವಿದೇಶಗಳಲ್ಲೂ ಸಂಭ್ರಮ ಮನೆಮಾಡಿದೆ.

ಬಳಂಜದ ದೊಡ್ಡ ಮಂಟಪದಲ್ಲಿ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಪೋಟೋ ಇಟ್ಟು ಶೃಂಗಾರ ಮಾಡಲಾಗಿದೆ.

ವೀರಕೇಸರಿ ಹಿಂದೂಪುರ ಬಳಂಜ ಸಂಘಟನೆಯು ಅಲಂಕಾರ ಮಾಡಿದ್ದು ಹೆಚ್ಚಿನ ಸಂಘ ಸಂಸ್ಥೆ,ಮನೆಗಳಲ್ಲಿ ಶ್ರೀರಾಮನ ಪೋಟೋವಿರುವ ಪತಾಕೆ, ಕೇಸರಿ ಪತಾಕೆ ರಾರಾಜಿಸುತ್ತಿದೆ.

Leave a Comment

error: Content is protected !!