ಬಜೆಟ್ ನಲ್ಲಿ ಓಲೈಕೆಗೆ ಒತ್ತು‌ ಹಾಗೂ ಅಭಿವೃದ್ಧಿಯ ಆಶಯ ಮಸುಕಾಗಿದೆ : ಪ್ರತಾಪಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಜನಪ್ರಿಯತೆ ಹಾಗೂ ಓಲೈಕೆಗೆ ಒತ್ತು‌ನೀಡಿದೆ. ಜನಪ್ರಿಯ ಫೋಷಣೆಗಳಿವೆ, ಆದರೆ ಅವುಗಳಿಗೆ ಕೊಡಮಾಡಿದ ಅನುದಾನ ಬಹಳ ಕಡಿಮೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಪ್ರತಿಕ್ರಿಯೆ ನೀಡಿದ್ದಾರೆ.ಗ್ಯಾರಂಟಿ ಯೋಜನೆಗಳಿಗೆ ಬಹಳ ಒತ್ತು ನೀಡಲಾಗಿದೆ. ಅಭಿವೃದ್ಧಿ ಯ ಆಶಯ ಮಸುಕಾಗಿದೆ.

ಸರಕಾರದ ಬಜೆಟ್ ಹಾಗೂ ಕಾರ್ಯಕ್ರಮಗಳು ಸಾಮರ್ಥ್ಯ ವರ್ಧನೆಗೆ ಮಹತ್ವ ನೀಡಬೇಕು. ದುಃಖಕರ ಸಂಗತಿ ಎಂದರೆ ಜನಸಾಮಾನ್ಯರನ್ನು ಸ್ವಾವಲಂಬಿಗಳಾಗಿ ಮಾಡುವ ಬದಲು ಸರಕಾರದ ಕೊಡುಗೆಗಳ ಮೇಲೆ ಅವಲಂಬನೆ ಜಾಸ್ತಿ ಆಗುವಂತೆ ಮಾಡಲಾಗಿದೆ.ಇದು ಸುಸ್ಥಿರ ಅಭಿವೃದ್ಧಿ ಗೆ ಪೂರಕವಲ್ಲ.ಎಲ್ಲೋ ಅಭಿವೃದ್ಧಿ ಯ ಹೆಜ್ಜೆ ಹಿಂದೆ ಇಟ್ಟಂತೆ ಭಾಸವಾಗುತ್ತಿದೆ ಎಂದು ತಿಳಿಸಿದ್ದಾರೆ.

Leave a Comment

error: Content is protected !!