March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಪರ್ವ-2024′ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನದಲ್ಲಿ ಸರ್ವ ದೈವಾರಾಧಕರಿಗೆ ಸನ್ಮಾನ: ಸಂಪತ್ ಬಿ ಸುವರ್ಣ

ಬೆಳ್ತಂಗಡಿ:ತಾಲೂಕಿನ ಗುರುವಾಯನಕೆರೆಯ ರತ್ನಗಿರಿ ಶ್ರೀ ಸನ್ಯಾಸಿಗುಳಿಗ ಕ್ಷೇತ್ರದಲ್ಲಿ ಫೆಬ್ರವರಿ 27, 28, 29 ಮತ್ತು ಮಾರ್ಚ್ 01, 02ರಂದು ನಡೆಯಲಿರುವ ಪುನರ್‌ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ‘ಪರ್ವ- 2024’ ಎಂಬ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ ಏರ್ಪಡಿಸಲಾಗಿದೆ.

ಈ ಸಂದರ್ಭದಲ್ಲಿ ತುಳುನಾಡಿನ ಸರ್ವ ದೈವ ನರ್ತಕರಿಗೆ, ದೈವಸ್ಥಾನ ಹಾಗೂ ಗರೋಡಿ ಪಾತ್ರಿಗಳಿಗೆ, ದೈವದ ಆಯುಧ, ಮೊಗಮೂರ್ತಿ ಹಿಡಿಯುವ ಪೂಜಾರಿ, ಮುಕ್ಕಾಲ್ಲಿ, ಜೀಟಿಗೆ ಹಿಡಿಯುವವರಿಗೆ, ಮಧ್ಯಸ್ಥರಿಗೆ ಮತ್ತಿತರ ಸರ್ವ ಪ್ರಕಾರದ ದೈವಾರಾಧನೆಯ ಚಾಕರಿ ಮಾಡುವವರಿಗೆ, ದೈವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರಿಗೆ, ಭಂಡಾರದ ಮನೆತನದವರಿಗೆ, ಗುತ್ತು ಬರ್ಕೆಯವರಿಗೆ ಗೌರವಾರ್ಪಣೆ ಸಲ್ಲಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪರ್ವ ಮಹಾ ಸಮ್ಮೇಳನದ ಸಂಚಾಲಕ ಸಂಪತ್ ಬಿ ಸುವರ್ಣ ತಿಳಿಸಿದ್ದಾರೆ.

ದೈವಾರಾಧನೆಗೆ ಸಂಬಂಧಪಟ್ಟಂತ ಸರ್ವರೂ ಪಾಲ್ಗೊಳ್ಳುವ ಈ ಮಹೋನ್ನತ ಕಾರ್ಯಕ್ರಮದಲ್ಲಿ ತಾವೆಲ್ಲರೂ ಇರಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಆದ್ದರಿಂದ ‘ಪರ್ವ-2024’ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನಕ್ಕೆ ಸರ್ವ ದೈವಾರಾಧಕರು ಆಗಮಿಸಿ ನಮ್ಮ ಸನ್ಮಾನ ಸ್ವೀಕರಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ‘ಪರ್ವ 2024’ರ ಪ್ರಧಾನ ಸಂಚಾಲಕರಾದ ಸಂಪತ್ ಬಿ. ಸುವರ್ಣ (ಸಂಪರ್ಕ ಸಂಖ್ಯೆ 9663373940 ಅಥವಾ 9448188974)ರವರನ್ನು ಸಂಪರ್ಕಿಸಬಹುದು.

Related posts

ತೋಟತ್ತಾಡಿ : ವಿ. ಒ. ಜೋಸೆಫ್ ಕುರುಪ್ಪನಾಟ್ ನಿಧನ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ಅಂಗಣೋತ್ಸವ “ದೇವರ ದರ್ಶನ ಬಲಿ”, ಬಟ್ಟಲು ಕಾಣಿಕೆ

Suddi Udaya

ಹೈಕೋರ್ಟ್ ನ ಹಿರಿಯ ನ್ಯಾಯವಾದಿ ಬಾಲನ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಭೇಟಿ

Suddi Udaya

ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ನಿಂದ ಕಾರ್ಗಿಲ್ ವಿಜಯ್ ದಿವಸ ಆಚರಣೆ

Suddi Udaya

ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಆಟಿದ ಮಿನದನ’

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ರವರ ಅಕೌಂಟ್ ಹ್ಯಾಕ್

Suddi Udaya
error: Content is protected !!