ವೇಣೂರು : ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಹೆಲಿಕಾಪ್ಟರ್ ಮೂಲಕ ಪುಪ್ಷವ್ರಷ್ಟಿ

Suddi Udaya

ವೇಣೂರು: ವೇಣೂರಿನಲ್ಲಿ ಫೆ.23 ರಂದು ಬಾಹುಬಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಸೇವಾಕತೃಗಳಾದ ವೇಣೂರಿನ ಪ್ರವೀಣ್ ಕುಮಾರ್ ಇಂದ್ರ ಮತ್ತು ಅಶ್ವಿನಿಕುಮಾರಿ ಹಾಗೂ ಮಕ್ಕಳಾದ ಸತ್ಯಪ್ರಸಾದ್, ಸತ್ಯಶ್ರೀ, ಸತ್ಯಪ್ರಭಾ ಮತ್ತು ವಿಶ್ವೈನ್ ಹಾಗೂ ಕುಟುಂಬಸ್ಥರ ವತಿಯಿಂದ ಶುಕ್ರವಾರ ಮಧ್ಯಾಹ್ನ ಒಂದೂವರೆ ಗಂಟೆಗೆ ಹೆಲಿಕಾಪ್ಟರ್ ಮೂಲಕ ಪುಪ್ಷವ್ರಷ್ಟಿ ಮಾಡಲಾಯಿತು.

ಭಕ್ತಾದಿಗಳು ಶ್ರದ್ದಾ-ಭಕ್ತಿಯಿಂದ ಕಣ್ತುಂಬಿಕೊಂಡು ಬಾಹುಬಲಿ ಸ್ವಾಮಿಗೆ ಜೈಕಾರ ಹಾಕಿದರು.
ಯುಗಳಮುನಿಗಳೂ ಪುಪ್ಷವ್ರಷ್ಟಿ ವೀಕ್ಶಿಸಿ ಧನ್ಯತೆಯನ್ನು ಹೊಂದಿದರು.
ಸೇವಾಕರ್ತರ ವತಿಯಿಂದ ನಿತ್ಯವಿಧಿ ಸಹಿತ ಮ್ರತ್ತಿಕಾಸಂಗ್ರಹ, ಅಂಕುರಾರ್ಪಣೆ ,ಪಂಚಕಲ್ಯಾಣಮಂಟಪ ಪ್ರವೇಶ, ಯಕ್ಷಾರಾಧನಾ ಪೂರ್ವಕ ಯಕ್ಶಪ್ರತಿಷ್ಟೆ ಮತ್ತ ಧ್ವಜಾರೋಹಣ ಮತ್ತು ಬ್ರಹ್ಮಯಕ್ಷ ಪ್ರತಿಷ್ಟೆ ಮೊದಲಾದ ಧಾರ್ಮಿಕ ವಿಧಿ- ವಿಧಾನಗಳು ನಡೆದವು.

Leave a Comment

error: Content is protected !!