ನಿಡ್ಲೆ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಟೋಚಾಲಕ

Suddi Udaya

ನಿಡ್ಲೆ : ಇಲ್ಲಿಯ ಬರೆಂಗಾಯ ಕಲ್ಕುಡ ಗುಡ್ಡೆ ನಿವಾಸಿ ಆಟೋಚಾಲಕ ಅವಿನಾಶ್ (23ವ.) ರವರು ಮನೆ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 27ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಇವರು ಬರೆಂಗಾಯದಲ್ಲಿ ಆಟೋಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮನೆಯಲ್ಲಿ ಒಬ್ಬರೇ ಇರುವ ಅವಿನಾಶ್ ರವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಮೃತರು ಸಹೋದರ, ಸಹೋದರಿಯರನ್ನು, ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!