24.5 C
ಪುತ್ತೂರು, ಬೆಳ್ತಂಗಡಿ
April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅನಾಥರಾಗಿ ತಿರುಗಿಡುತ್ತಿದ್ದ ವಯೋವೃದ್ಧ ತಂದೆಯನ್ನು ಮಗನ ಜವಾಬ್ದಾರಿ ಗೆ ವಹಿಸಿದ ವೇಣೂರು ಪೋಲೀಸರು

ಬೆಳ್ತಂಗಡಿ : ಮಾ.13ರಂದು ರಾತ್ರಿ 12 ಗಂಟೆಗೆ ನಾಲ್ಕೂರು ಗ್ರಾಮದ ಆಸುಪಾಸಿನಲ್ಲಿ ಜನ ನಿಬಿಡ ಪ್ರದೇಶದಲ್ಲಿ ವಯೋವೃದ್ಧ ರೋರ್ವರು ಅನಾಥರಾಗಿ ಹಸಿವಿನಿಂದ ನರಳುತಿದ್ದು ಸ್ಥಳೀಯ ಬಳಂಜ ಪಂಚಾಯತ್ ಸದಸ್ಯ ರವೀಂದ್ರ ಅಮೀನ್ ಬಳಗದವರು ಪೋಲೀಸ್ ರ ಸಹಾಯದಿಂದ ಅವರನ್ನು ಗುಂಡೂರಿಯ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ತಾತ್ಕಾಲಿಕ ನೆಲೆಗೆ ವ್ಯವಸ್ಥೆ ಮಾಡಿದರು.

ಪೋಲಿಸರು ಈ ವಯೋವೃದ್ಧರ ಮಕ್ಕಳನ್ನು ಸಂಪರ್ಕಿಸಿ, ಮಾ.14ರಂದು ಇಂದು ವೇಣೂರು ಪೋಲೀಸ್ ಠಾಣೆಗೆ ಬಂದ ಮಗನಿಗೆ ಪೊಲೀಸರು ಬುದ್ಧಿವಾದ ಹೇಳಿ ಈ ವಯೋ ವೃದ್ಧ ತಂದೆಯನ್ನು ಮಗನ ಜತೆ ಕಳುಹಿಸಲಾಯಿತು.

ಕಿವಿ ಕೇಳದ ಈ ವಯೋವೃದ್ಧರಲ್ಲಿ ಸರಿಯಾದ ಮಾಹಿತಿ ತಿಳಿಯಲು ಹರಸಾಹಸ ಪಡೆಯಲಾಯಿತು.ಈ ಮೂಲಕ ಪೋಲೀಸರು ಮಗನ ಸಂಪರ್ಕ ವನ್ನು ಸಾಧಿಸಿ ಪೋಲೀಸ್ ಠಾಣೆಗೆ ಕರೆಯಿಸಿ ಸಾವ೯ಜನಿಕರ ಮೆಚ್ಚುಗೆಗೆ ಪಾತ್ರರಾದರು.

ವಯೋವೃದ್ಧ ಉಡುಪಿಯ ಶಂಕರನಾರಾಯಣ ಪೋಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು. ವಯೋ ಸಹಜ ಡಿಮೆನ್ಸಿಯಾ ರೋಗದಿಂದ ಬಳಲು ತಿದ್ದುರು. ಮನೆಯಲ್ಲಿ ನಿಲ್ಲದೆ ಊರೂರು ತಿರುಗುವ ಚಾಳಿ ಇದ್ದು.ಮರಗುಳಿತನವೂ ಇದೆ.

ಮಗನಿಗೆ ತಂದೆಯ ಹಸ್ತಾಂತರ ದ ಸಮಯ ರವೀಂದ್ರ ಅಮೀನ್ ಮತ್ತು ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಉಪಸ್ಥಿತರಿದ್ದರು.

Related posts

ಜೆಸಿಐ ಭಾರತದ ವಲಯ 15ರ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಜೇಸಿ ಹೆಚ್.ಜಿ.ಎಫ್ ಅಶೋಕ್ ಗುಂಡಿಯಲ್ಕೆ ಆಯ್ಕೆ

Suddi Udaya

ಮಾಲಾಡಿ: ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಪಿಕಪ್ ನಡುವೆ ಅಪಘಾತ

Suddi Udaya

ಮುಂಡಾಜೆ ಅಗರಿಯಲ್ಲಿ ಪ್ರಾಣಕ್ಕೆ ಕಂಟಕ ವಾಗಿರುವ ವಿದ್ಯುತ್ ತಂತಿ.

Suddi Udaya

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಹಿಂದಿ ದಿವಸ ಆಚರಣೆ

Suddi Udaya

ರಾಜ್ಯದ 5,8 ಮತ್ತು 9ನೇ ತರಗತಿ “ಬೋರ್ಡ್​” ಪರೀಕ್ಷೆಗೆ “ಸುಪ್ರೀಂ ಕೋರ್ಟ್” ತಡೆಯಾಜ್ಞೆ

Suddi Udaya

ವಾಣಿ ಕಾಲೇಜು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Suddi Udaya
error: Content is protected !!