April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಸಂತ ಅಂತೋನಿ ಚರ್ಚ್ ನಿಂದ ಅರ್ಹ ಕುಟುಂಬದ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಉಜಿರೆ ಸಂತ ಅಂತೋನಿ ಚರ್ಚ್ ನ ಸಂತ ಲಾರೆನ್ಸ್ ವಾಳೆಯ ‘ರೋಜಿ ಪಾಯ್ಸ್’ ಎಂಬ ಅರ್ಹ ಕುಟುಂಬಕ್ಕೆ ಉಜಿರೆ ಸಂತ ಅಂತೋನಿ ಚರ್ಚ್ ನ ಮುಂದಾಳತ್ವದಲ್ಲಿ ನೂತನ ಮನೆ ನಿರ್ಮಾಣಕ್ಕೆ ಎ.2ರಂದು ಚರ್ಚ್ ನ ಧರ್ಮಗುರು ಫಾ.ಜೇಮ್ಸ್ ಡಿಸೋಜ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ.ವಿಜಯ್ ಲೋಬೋ, ಪ್ರಸ್ತುತ ತಾಂಜಾನಿಯಾದಲ್ಲಿ ಸೇವೆ ನೀಡುತ್ತಿರುವ ಫಾ.ಸುನಿಲ್ ಮಿನೇಜಸ್, ಪಾಲನಾ ಮಂಡಳಿ ಉಪಾಧ್ಯಕ್ಷ ಹಾಗೂ ಈ ಯೋಜನೆಯ ಮೇಲ್ವಿಚಾರಾಕ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ವಾಳೆಯ ಗುರಿಕಾರ ವಿಲಿಯಂ ಡಿಸೋಜ, ವಾಳೆಯ ಪ್ರತಿನಿಧಿ ಗಳಾದ ರಾಬರ್ಟ್ ಹಾಗೂ ಮರ್ಲಿನ್ ಡಿಸೋಜ, ಎಸ್.ವಿ.ಪಿ ಅಧ್ಯಕ್ಷ ರಿಚರ್ಡ್ ಡಿಸೋಜ, ಸಮುದಾಯ ಸಂಚಾಲಕ ರೋಶನ್ ಡಿಸೋಜ, ದಾನಿಗಳು, ಪಲಾನುಭವಿಯ ಕುಟುಂಬಸ್ಥರು ಉಪಸ್ಥಿತರಿದ್ದರು.

ಸಂತ ಅಂತೋನಿ ಚರ್ಚ್ ವತಿಯಿಂದ ಬಡ ಹಾಗೂ ಅರ್ಹ ಕುಟುಂಬಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಮನೆ ನವೀಕರಣ ಹಾಗೂ ಹೊಸ ಮನೆಗಳನ್ನು ದಾನಿಗಳ ನೆರವಿನಿಂದ ಕಟ್ಟಿಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಈಗಾಗಲೇ ಸುಮಾರು 23 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲ್ಕು ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ.

Related posts

ಪ್ರಜಾಪ್ರಭುತ್ವದ ದೊಡ್ಡ ಹಬ್ಬದಲ್ಲಿ ಸಂಭ್ರಮಸಿದ ಬಳಂಜ- ನಾಲ್ಕೂರಿನ ಮತದಾರರು ಬಿರುಸಿನ ಮತದಾನ, ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ

Suddi Udaya

ಪಡಂಗಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಮತಯಾಚನೆ

Suddi Udaya

ನೆರಿಯ ಗ್ರಾ.ಪಂ. ಅಧ್ಯಕ್ಷರಾಗಿ ವಸಂತಿ ಹಾಗೂ ಉಪಾಧ್ಯಕ್ಷರಾಗಿ ಸಜಿತಾ ಆಯ್ಕೆ

Suddi Udaya

ಗೇರುಕಟ್ಟೆ: ಕೊರಂಜ ನಿವಾಸಿ ದೇವಕಿ ಆಳ್ವ ನಿಧನ

Suddi Udaya

ಬೆಳ್ತಂಗಡಿ ಲಯನ್ಸ್ ಝೋನ್ ಮಟ್ಟದ ಸೆಮಿನಾರ್

Suddi Udaya

ಬಿಜೆಪಿ ಮುಖಂಡ ರಾಜೇಶ್ ಕೊಲೆ ಯತ್ನ ಪ್ರಕರಣ: ಆರೋಪಿ ಕುಶಾಲಪ್ಪ ಗೌಡ ಬಂಧನ

Suddi Udaya
error: Content is protected !!