ಬದ್ಯಾರ್: ವಿದ್ವತ್ ಪಿಯು ಕಾಲೇಜ್ ಸಾಂಸ್ಕೃತಿಕ ಸೌರಭ

Suddi Udaya

Updated on:

ಬದ್ಯಾರ್: ವಿದ್ವತ್ ಪಿಯು ಕಾಲೇಜ್ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಎ.೨೨ರಂದು ವೈಭವದಿಂದ ಮೂಡಿಬಂತು. ವಿದ್ವತ್ ಕಾಲೇಜು ಶಿಕ್ಷಣದ ಜೊತೆಗೆ ಪೂರಕವಾಗಿ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಅಡಿಪಾಯ ಎಂದು ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ವಿಶ್ವಸ್ಥರಾದ ಎಂ.ಕೆ ಕಾಶಿನಾಥ್ ಮತ್ತು ವೇದವ್ಯಾಸ ಶಿಶು ಮಂದಿರದ ಅಧ್ಯಕ್ಷರಾದ ಶ್ರೀಮತಿ ಇಂದುಮತಿಯವರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ವೇದವ್ಯಾಸ ಶಿಶು

ಮಂದಿರದ ಪುಟಾಣಿಗಳು ಮತ್ತು ಬಾಲಗೋಕುಲದ ವಿದ್ಯಾರ್ಥಿಗಳಿಂದ ಮನೋರಂಜನಾತ್ಮಕ ನೃತ್ಯಗಳು ನಡೆದವು. ಕಾರ್ಯಕ್ರಮದಲ್ಲಿ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ವಿಶ್ವಸ್ಥರು ಉಪನ್ಯಾಸಕರು, ವೇದವ್ಯಾಸ ಶಿಶು ಮಂದಿರದ ಶಿಕ್ಷಕರು,ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ವಿದ್ವತ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಪ್ರಜ್ವಲ್ ಜೆ ವಂದಿಸಿದರು. ಕನ್ನಡ ಉಪನ್ಯಾಸಕ ನೀಲಕಂಠ ಕಾರ್ಯಕ್ರಮದ ನಿರೂಪಿಸಿದರು.

Leave a Comment

error: Content is protected !!