ಮಾಲಾಡಿ: ಬೆನ್ನುನೋವಿನ ಸಮಸ್ಯೆಯಿಂದ ಮನನೊಂದು ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಮಾಲಾಡಿ: ಇಲ್ಲಿಯ ಕೊಲ್ಪೆದಬೈಲ್ ಅತಿ೯ಲ‌ ನಿವಾಸಿ ವಲೇರಿಯನ್ ಡಿಸೋಜಾ(78ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 15 ರಂದು ವರದಿಯಾಗಿದೆ.


ಈ ಬಗ್ಗೆ ರೀಟಾ ಲೋಬೋ ಪೊಲೀಸರಿಗೆ ದೂರು ನೀಡಿ, ತನ್ನ ಗಂಡ ವಲೇರಿಯನ್ ಡಿಸೋಜಾ ಇತ್ತಿಚೀಗೆ ಗ್ಯಾಸ್ಟ್ರಿಕ್ ಮೂಲವ್ಯಾಧಿ, ಹಾಗೂ ವಿಪರೀತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮೇ 14 ರಂದು ತನ್ನ ಮಗ, ಮಕ್ಕಳೊಂದಿಗೆ ಆತನ ಹೆಂಡತಿಯ ಅಕ್ಕನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾರೆ. ಮನೆಯಲ್ಲಿ ನಾನು ಹಾಗೂ ಗಂಡ ವಲೇರಿಯನ್ ಡಿಸೋಜಾ ಮಾತ್ರ ಇದ್ದೆವು. ಮೇ 15 ರಂದು ಬೆಳಿಗ್ಗೆ 6 ಗಂಟೆಗೆ ನಾನು ಮಡಂತ್ಯಾರು ಚರ್ಚ್ ಗೆ ಹೋಗಿ ಬೆಳಿಗ್ಗೆ 7:30ಕ್ಕೆ ಮನೆಗೆ ವಾಪಾಸು ಬಂದು ಗಂಡನನ್ನು ಕರೆದಾಗ ಪ್ರತ್ಯುತ್ತರ ಇಲ್ಲದುದರಿಂದ ಮನೆಯ ಒಳಗಡೆ ಹೊರಗಡೆ ಹುಡುಕಿದಾಗ ಗಂಡ ವಲೇರಿಯನ್ ಡಿಸೋಜಾ ರವರು ಮನೆಯ ಹಿಂಬದಿಯಲ್ಲಿ ಇರುವ 2 ಕಿಟಕಿಯ ಸನ್ ಡ್ಯಾಪ್ ನ ಮದ್ಯೆ ಇಟ್ಟಿದ್ದ ಮರದ ಪಕ್ಕಾಸಿ ಮದ್ಯಭಾಗಕ್ಕೆ ನೈಲಾನ್ ಹಗ್ಗವನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಇತ್ತಿಚೇಗೆ ಗ್ಯಾಸ್ಟ್ರಿಕ್ ಮೂಲವ್ಯಾಧಿ, ಹಾಗೂ ವಿಪರೀತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!