ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮುಳಿಯ ಜುವೆಲ್ಲರ್ಸ್ ವತಿಯಿಂದ ವನಮಹೋತ್ಸವ

Suddi Udaya

ಬೆಳ್ತಂಗಡಿ: ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮುಳಿಯ ಜುವೆಲ್ಲರ್ಸ್ ಬೆಳ್ತಂಗಡಿ ಇವರ ಸಹಭಾಗಿತ್ವದೊಂದಿಗೆ ವನಮಹೋತ್ಸವವನ್ನು ಜೂ. 5 ರಂದು ಆಚರಿಸಲಾಯಿತು.

ಮುಳಿಯ ಜುವೆಲರ್ಸ್ ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ದಿನೇಶ ಹಾಗೂ ಮಾರ್ಕೆಟಿಂಗ್ ವಿಭಾಗದ ಜಯಂತ್ ಉಪಸ್ಥಿತರಿದ್ದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್ ಸ್ವಾಗತಿಸಿ, ಯಶೋಧ ಪ್ರಾರ್ಥಿಸಿ, ಉಮಾ ರಾವ್ ನಿರೂಪಿಸಿ, ಲೋಕೇಶ್ವರಿ ವಿನಯ ಚಂದ್ರ ಪ್ರಾಸ್ತಾವಿಸಿ, ಆಶಾ ಸತೀಶ್ ಧನ್ಯವಾದವಿತ್ತರು.

ಗೌರಿ ಪಣಿಕಾರ್, ವಿನೋದಿನಿ ರಾಮಪ್ಪ, ಸೌಮ್ಯ, ಸಂಧ್ಯಾ ಕಿರಣ್, ಗೀತಾ ಜೈನ್, ಶಾರದ ಉಪಸ್ಥಿತರಿದ್ದರು.

Leave a Comment

error: Content is protected !!