ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪಿನಿಂದ ಎರಡನೇ ಸೇವಾ ಯೋಜನೆ ಹಸ್ತಾಂತರ

Suddi Udaya

ಬೆಳ್ತಂಗಡಿ: ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪಿನಿಂದ ಎರಡನೇ ಸೇವಾ ಯೋಜನೆಯನ್ನು ಕಳಿಯ ಗ್ರಾಮದ ಮೆರ್ಲ ಬೋಮ್ಮನ ಪೂಜಾರಿಯವರ ಮಗ ಹೂವಿನ ವ್ಯಾಪಾರ ಮಾಡುತ್ತಿದ್ದ ಶಿವರಾಮ ಇವರು ಗುರುವಾಯನಕೆರೆ ಹತ್ತಿರ ರಸ್ತೆ ಅಪಘಾತದಲ್ಲಿ ಒಂದುವರೆ ತಿಂಗಳಿನಿಂದ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಶಿವರಾಮ ಇವರ ತಂದೆಗೆ ಸಹಾಯಧನವಾಗಿ ರೂ 34,000 ಹಸ್ತಾಂತರಿಸಲಾಯಿತು.

ವಾಟ್ಸಾಪ್ ಗ್ರೂಪಿನ ಅಡ್ಮಿನ್ ಬೆಳ್ತಂಗಡಿ ಟೈಲರ್ಸ್ ಅಸೋಸಿಯೇಶನ್ ವಲಯ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಜಾದೂಗರ ಬಿ.ಹೆಚ್ ರಾಜೀವ, ಕೆಸಿ ಕ್ಯಾಟರರ್ಸ್ ಮಾಲಕ ದೇವರಾಜ್., ಎಸ್.ಆರ್. ಸಾಮಿಯಾನ ಮಾಲಕ ಯೋಗೀಶ್ ಗೇರುಕಟ್ಟೆ, ಜಯರಾಜ್ ನಡಕ್ಕರ ಸುಖೇಶ್ ಪೂಜಾರಿ ಉಪಸ್ಥಿತರಿದ್ದರು.

Leave a Comment

error: Content is protected !!