ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲದಿಂದ ಚಿಕಿತ್ಸಾ ನೆರವು

Suddi Udaya

ಕಳಿಯ ಗ್ರಾಮದ ಕೋಜಪ್ಪಾಡಿ ಮನೆಯ ಯಜ್ಞೇಶ್ ಪೂಜಾರಿಯವರು ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅವರ ಎರಡು ಕಾಲುಗಳು ಮುರಿತಕೊಳ್ಳಗಾಗಿದು ಶಸ್ತ್ರ ಚಿಕಿತ್ಸೆಗೆ ಸಹಾಯ ಧನವನ್ನು ಶ್ರೀ ಸ್ಟಾರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಪಣೆಜಾಲು ಇದರ ವತಿಯಿಂದ ರೂ 10,000 ಚೆಕ್ ಮುಖಾಂತರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಪೂಜಾರಿ ಆದೆಲು, ಕಾರ್ಯದರ್ಶಿ ಹರೀಶ್ ಗಾಣಿಗ ಗುಂಪಲಾಜೆ, ಸಾಂಸ್ಕೃತಿಕ ಕಾರ್ಯದರ್ಶಿ ಜಗನ್ನಾಥ್ ಕುಲಾಲ್ ಸಿರಿಮಜಲ್ ಮತ್ತು ಸದಸ್ಯರಾದ ರಾಜೇಶ್ ಪೂಜಾರಿ ಆದೆಲು ಉಪಸ್ಥಿತರಿದ್ದರು.

Leave a Comment

error: Content is protected !!