ಸಹಕಾರಿ ಸಂಘದ ವತಿಯಿಂದ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಅವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲೊಂದಾದ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಬೆಳ್ತಂಗಡಿ ಇದರ ಉಪಾಧ್ಯಕ್ಷರಾದ ಚಿದಾನಂದ ಹೂಗಾರ್ ಅವರಿಗೆ ಸಹಕಾರಿ ಸಂಘದ ವತಿಯಿಂದ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಕೆ. ಜಯಕೀರ್ತಿ ಜೈನ್ ರವರ ಅಧ್ಯಕ್ಷತೆಯಲ್ಲಿ ಅಭಿನಂದಿಸಲಾಯಿತು..

ವಿಶೇಷ ಅತಿಥಿಯಾಗಿ ತಾಲೂಕು ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಪ್ರತಿಮಾ ಬಿ. ವಿ.. ಯವರು ಭಾಗವಹಿಸಿದ್ದರು. ನಿರ್ದೇಶಕರಾದ ಹರಿಪ್ರಸಾದ್ ರವರು ಸ್ವಾಗತಿಸಿ ನಿರ್ದೇಶಕರಾದ ಚಂದ್ರಶೇಖರ್ ಸನ್ಮಾನ ಪತ್ರ ವಾಚಿಸಿದರು. ನಿರ್ದೇಶಕರಾದ ಪ್ರಶಾಂತ್ ಕುಮಾರ್ ರವರು ವಂದನಾರ್ಪಣೆ ಮಾಡಿದರು. ಸಲಹೆಗಾರರಾದ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು ನಿರ್ದೇಶಕರಾದ ಶ್ರೀಮತಿ ಆರತಿ, ಜಯರಾಜ್ ಜೈನ್, ಶ್ರೀಮತಿ ವಾರಿಜ, ಶ್ರೀಮತಿ ಹೇಮಲತಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವತ್ಸಲ ಜ್ಯೋತಿರಾಜ್, ಶ್ರೀಮತಿ ವಿಶಾಲ್, ಧನ ಕೀರ್ತಿ ಜೈನ್, ಸನತ್ ಕುಮಾರ್, ಶ್ರೀಮತಿ ರಶ್ಮಿ., ಶ್ರೀಮತಿ ಸಂಗೀತ, ಶ್ರೀಮತಿ ಸೌಮ್ಯ ಮೊದಲಾದವರಿದ್ದರು.

Leave a Comment

error: Content is protected !!