ಮೇಲಂತಬೆಟ್ಟು ಗ್ರಾ.ಪಂ.ನಿಂದ ಪ್ರಕೃತಿ ವಿಕೋಪಗೊಂಡಾಗ ಕೈಗೊಳ್ಳಬೇಕಾದ ಕ್ರಮ ಹಾಗೂ ಡೆಂಗ್ಯೂ ಜ್ವರ ಉತ್ಪತ್ತಿ ಹಾಗೂ ಹರಡುವ ಬಗ್ಗೆ ಮಾಹಿತಿ

Suddi Udaya

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸವಣಾಲು ಗ್ರಾಮದ ರಘುಚಂದ್ರ ಭಂಡಾರಿ ರವರ ಮನೆ ಬಳಿ ಅಂಶಿಕ ಗುಡ್ಡ ಜಾರಿದ್ದು, ಇದು ಇನ್ನೂ ಬೀಳುವ ಸಾಧ್ಯತೆ ಇರುತ್ತದೆ ಹಾಗಾಗಿ ಪ್ರಕೃತಿ ವಿಕೋಪಗೊಂಡಾಗ ಕೈಗೊಳ್ಳ ಬೇಕಾದ ಕ್ರಮದ ಬಗ್ಗೆ ಮೇಲಂತಬೆಟ್ಟು ಗ್ರಾ.ಪಂ.ನಿಂದ ಮಾಹಿತಿ ನೀಡಿದರು.

ಮನೆ ಸುತ್ತಲೂ ಇರುವ ನೀರು ಸಂಗ್ರಹ ತಾಣಗಳನ್ನು ತೆಗೆದು ಹಾಕುವಂತೆ ಹಾಗೂ ಡೆಂಗ್ಯೂ ಜ್ವರ ಉತ್ಪತ್ತಿ ಹಾಗೂ ಹರಡುವ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ, ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಲೋಕನಾಥ್ ಶೆಟ್ಟಿ, ಕಾರ್ಯದರ್ಶಿ ನಿರ್ಮಾಲ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ ಹೆಗ್ಡೆ ಉಪಸ್ಥಿತರಿದ್ದರು.

Leave a Comment

error: Content is protected !!