ಸುಲ್ಕೇರಿಮೊಗ್ರು ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಇಂದುಗ್ರಾಂ.ಪಂ. ಆಡಳಿತ ಮಂಡಳಿ ಭೇಟಿ

Suddi Udaya

ಸುಲ್ಕೇರಿಮೊಗ್ರು ಗ್ರಾಮದಲ್ಲಿ ಸಂಭವಿಸಿದ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಇಂದು ( ಆ. 1) ಪಂಚಾಯತ್ ಅಧ್ಯಕ್ಷರಾದ ಸರಸ್ವತಿನಾಯ್ಕ್ ಯವರು ಹಾಗೂ ಸದಸ್ಯರಾದ ಶಾಂತಿ ಕಿರಣ್ ಹಾಗೂ ಪಿ. ಡಿ. ಓ. ಪೂರ್ಣಿಮಾ. ಜೆ ಹಾಗೂ ಗ್ರಾಮ ಕರಣಿಕರೊಂದಿಗೆ ಸ್ಥಳಪರಿಶೀಲನೆ ನಡೆಸಲಾಯಿತು.

ಮಂಜುಳ ದೇವಪ್ಪಮೂಲ್ಯ ಮನೆಗೆ ನಾಯಿಜೆ ಚಂದಯ ಮಡಿವಾಳ ಮನೆಗೆ, ಮಹಿಷ ಮರ್ದಿನಿ ದೇವಸ್ಥಾನದ ರಸ್ತೆ, ಹೊಕ್ಕಳ ರಸ್ತೆ, ಪಡುಬೈಲು ರಸ್ತೆ, ಪಲ್ಕೆ ಕೊಚೋಟ್ಟು ರಸ್ತೆಯಲ್ಲಿ ಬಿದ್ದ ಮಣ್ಣುಗಳನ್ನು ತೆರವುಗೊಳಿಸಲಾಯಿತು. ಕೊಳಕೆ ಎಂಬಲ್ಲಿ ಆಣೆಕಟ್ಟದಲ್ಲಿ ಮರಗಳು ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಯಿತು. ಕಲ್ಪಿಲ ಎಂಬಲ್ಲಿ ಸುಲ್ಕೇರಿಮೊಗ್ರು ಗ್ರಾಮಕ್ಕೆ ಸಂಬಂಧಪಡುವ ಮನೆಗೆ ಬರೆ ಜರಿದು ಹಾನಿಯಾಗಿದನ್ನು ಪರಿಶೀಲನೆ ನಡೆಸಿದರು.

Leave a Comment

error: Content is protected !!