ಬೆಳ್ತಂಗಡಿ : ವನ್ಯಜೀವಿ ವಿಭಾಗದ ಆರ್.ಎಫ್.ಓ ಸ್ವಾತಿ ಎಲ್. ವರ್ಗಾವಣೆ: ನೂತನ ಆರ್.ಎಫ್.ಓ ಆಗಿ ವಿ. ಶರ್ಮಿಷ್ಠ ನೇಮಕ

Suddi Udaya

ಬೆಳ್ತಂಗಡಿ : ಕಳೆದ ಎರಡು ವರ್ಷಗಳಿಂದ ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್.ಎಫ್.ಓ ಅಗಿದ್ದ ಶ್ರೀ ಮತಿ ಸ್ವಾತಿ.ಎಲ್ ಅವರನ್ನು ಕೊಪ್ಪಲ ಜಿಲ್ಲೆಯ ಮುನಿರಾಬಾದ್ ವಲಯ ಅರಣ್ಯಾಧಿಕಾರಿಯಾಗಿ ಸರಕಾರ ವರ್ಗಾವಣೆ ಮಾಡಿದೆ.

ಶ್ರೀ ಮತಿ ಸ್ವಾತಿ.ಎಲ್ ಅವರ ತೆರವಾದ ಸ್ಥಾನಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಾರ್ಯ ಯೋಜನೆ ವಲಯ ಅರಣ್ಯಾಧಿಕಾರಿಯಾದ ಶ್ರೀಮತಿ ವಿ.ಶರ್ಮಿಷ್ಠ ಅವರನ್ನು ಸರಕಾರ ನೇಮಕ ಮಾಡಲಾಗಿದ್ದು. ಆ.6 ರಂದು ಬೆಳಗ್ಗೆ ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್.ಎಫ್.ಓ ಅಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Leave a Comment

error: Content is protected !!