ನಾವರ ಪೆರಡಾಲು ಗುತ್ತಿನ ಗುಣಪಾಲ ಅಜ್ರಿ ನಿಧನ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಪ್ರಸಿದ್ದ ಜೈನ ಮನೆತನದ ಪೆರಡಾಲು ಗುತ್ತಿನ ಗುಣಪಾಲ ಅಜ್ರಿ( 94 ವಯಸ್ಸು) ಆಗಸ್ಟ್ 21ರಂದು ನಿಧನ ಹೊಂದಿದರು.


ಮೃತರು 1975 ರ ದಶಕಗಳಲ್ಲಿ ಅಳದಂಗಡಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿಯೂ, ಪಿಲ್ಯ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜೈನರ ” ಅನಂತನೋಂಪಿ” ಉದ್ಯಾಪನೆ ಮಾಡಿದವರೂ ಆಗಿದ್ದಾರೆ.


ಮೃತರಿಗೆ ಮೂರು ಮಂದಿ ಪುತ್ರಿಯರು. ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು- ಬಳಗದವರನ್ನು ಅಗಲಿದ್ದಾರೆ.

Leave a Comment

error: Content is protected !!