ನಿಡ್ಲೆ: ಬೂಡುಜಾಲು ಹಾ.ಉ. ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

Suddi Udaya

ನಿಡ್ಲೆ: ಬೂಡುಜಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.16ರಂದು ಸಂಘದ ಆವರಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಿಥುನ್ ಕೆ. ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾವ್, ಅಂತರಿಕ ಲೆಕ್ಕ ಪರಿಶೋಧಕ ಗೋವಿಂದ ಭಟ್, ಉಪಾಧ್ಯಕ್ಷ ಕೊರಗಪ್ಪ ಗೌಡ, ನಿರ್ದೇಶಕರಾದ ಸುಧೀಂದ್ರ ರಾವ್, ನಾರಾಯಣ ಎನ್, ಸೇಸಪ್ಪ ಗೌಡ, ಮೋನಪ್ಪ ಗೌಡ, ಬಾಬು ಎಮ್.ಕೆ, ಗಿರೀಶ್ ಗೌಡ, ಶ್ರೀಮತಿ ರಮಣಿ ಬಿ, ಶ್ರೀಮತಿ ವಿದ್ಯಾಲತಾ ಉಪಸ್ಥಿತರಿದ್ದರು.

ದ.ಕ ಹಾಲು ಒಕ್ಕೂಟ ಶಿಬಿರ ಕಛೇರಿ ಬೆಳ್ತಂಗಡಿಯ ವಿಸ್ತರಣಾಧಿಕಾರಿ ರಾಜೇಶ್ ಪಿ.ಕೆ ಮಾಹಿತಿ ನೀಡಿದರು.

ಕಾರ್ಯದರ್ಶಿ ವೆಂಕಟೇಶ್ ಗೌಡ ವರದಿ ನೀಡಿದರು. ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಿಸಲಾಯಿತು. 2023-24 ರಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಅಧ್ಯಕ್ಷ ಮಿಥುನ್ ಕೆ. ಹಾಗೂ ವನಿತಾ ಎ., ರನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಕೊರಗಪ್ಪ ಗೌಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸುಧೀಂದ್ರ ರಾವ್ ವಂದಿಸಿದರು. ಸಹಾಯಕಿ ಶ್ರೀಮತಿ ಯಶೋಧ ಸಹಕರಿಸಿದರು.

Leave a Comment

error: Content is protected !!