ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ರಿಗೆ ದಿ| ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ

Suddi Udaya

ಬೆಳಾಲು: ಇಲ್ಲಿಯ ಗಾಂಧಿನಗರದ ಚಂದ್ರಯ್ಯ ಆಚಾರ್ಯ ಮತ್ತು ಜಾನಕಿ ದಂಪತಿಯವರ ಸುಪುತ್ರ, ಕಾಷ್ಠ ಶಿಲ್ಪ ಕಲೆಯಲ್ಲಿ ಕುಸುರಿ ಕೆಲಸ, ಮೂರ್ತಿ ಕೆತ್ತನೆ, ಪ್ರಕೃತಿ ಸೌಂದರ್ಯದ ಭಾವಚಿತ್ರದ ಕೆತ್ತನೆಯನ್ನು ಮಾಡಿ, ನೈಜತೆಯನ್ನು ಶಿಲ್ಪ ಕಲೆಯಲ್ಲಿ ಮಾಡಿರುವ ಶಿಲ್ಪಿ ಶಶಿಧರ ಆಚಾರ್ಯ ಇವರ ಸಾಧನೆಯನ್ನು ಗುರುತಿಸಿ ಸೆ.22ರಂದು ಮಂಗಳೂರಿನಲ್ಲಿ ನಡೆದ ವಿಶ್ವಕರ್ಮ ಬ್ಯಾಂಕಿನ 49ನೇ ಮಹಾಸಭೆಯಲ್ಲಿ ದಿ.ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ ನೀಡಿ ಗೌರವಿಸಿದರು.

ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ, ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು ಸನ್ಮಾನಿಸಿದರು.

Leave a Comment

error: Content is protected !!