ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಯಶೋವನ ಭೇಟಿ ಕಾರ್ಯಕ್ರಮ

Suddi Udaya

ಉಜಿರೆ : ಇಲ್ಲಿನ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ಉಜಿರೆಯ ವತಿಯಿಂದ ಎನ್ ಎಸ್ ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಹಭಾಗಿತ್ವದಲ್ಲಿ ಯಶೋವನಕ್ಕೆ ಸೆ.23 ರಂದು ಭೇಟಿ ಕೊಡಲಾಯಿತು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕುಮಾರಿ ಶಕುಂತಲಾ ಸಹಾಯಕ ಪ್ರಾಧ್ಯಾಪಕರು ಸಸ್ಯಶಾಸ್ತ್ರ ವಿಭಾಗ ಎಸ್ ಡಿ ಎಂ ಕಾಲೇಜು ಉಜಿರೆ ಮತ್ತು ಕುಮಾರಿ ಮಂಜುಶ್ರೀ ಸಹಾಯಕ ಪ್ರಾದ್ಯಾಪಕರು ಸಸ್ಯಶಾಸ್ತ್ರ ವಿಭಾಗ ಎಸ್ ಡಿ ಎಂ ಕಾಲೇಜು ಉಜಿರೆ ಇವರು ವಹಿಸಿ ವಿಧ್ಯಾರ್ಥಿಗಳಿಗೆ ವಿವಿಧ ಬಗೆಯ ಸಸ್ಯಗಳ ಬಗ್ಗೆ ಮತ್ತು ಔಷಧೀಯ ಗುಣವುಳ್ಳ ಗಿಡ ಹಾಗೂ ಮರಗಳ ಬಗ್ಗೆ ಪರಿಚಯಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ನ ಯೋಜನಾಧಿಕಾರಿ ಪ್ರಕಾಶ್ , ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಅವನೀಶ್ ಪಿ , ವಿಜ್ಞಾನ ವಿಭಾಗದ ರಾಜೇಶ್ ಕೆ, ಇಂಗ್ಲಿಷ್ ವಿಭಾಗದ ಶಂಕರ್ ಭಟ್, ಎನ್ ಎಸ್ ಎಸ್ ನ ಉಪಯೋಜನಾಧಿಕಾರಿ ಲೋಹಿತ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಿಬ್ಬಂಧಿಗಳು , ಎನ್ ಎಸ್ ಎಸ್ ನ ಸಿಬ್ಬಂಧಿಗಳು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment

error: Content is protected !!