ಧರ್ಮಸ್ಥಳ ಪ್ರಾ.ಕೃ.ಪ. ಸಹಕಾರ ಸಂಘದ ರೈತ ಸದಸ್ಯರಿಂದ ಕಡಮ್ಮಾಜೆ ಫಾರ್ಮ್ಸ್ ಗೆ ಭೇಟಿ: ಸಾಕಾಣಿಕೆಗಳ ಹಾಗೂ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಶಿಬಿರ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತ ಸದಸ್ಯರೊಂದಿಗೆ ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್ ಗೆ ಭೇಟಿ ನೀಡಿ ಅಲ್ಲಿಯ ಎಲ್ಲಾ ಸಾಕಾಣಿಕೆಗಳ ಹಾಗೂ ಸಾವಯವ ಗೊಬ್ಬರದ ಬಗ್ಗೆ ಸಂಪೂರ್ಣ ಮಾಹಿತಿ ಶಿಬಿರವು ಅ. 2ರಂದು ನಡೆಯಿತು.

ಶಿಬಿರದಲ್ಲಿ ಮೀನು ಸಾಕಾಣಿಕೆ, ಅದರ ಗೊಬ್ಬರದ • ಬಳಕೆಯ ಬಗ್ಗೆ ಮಾಹಿತಿ, ಕೃಷಿಗೆ ಸಂಬಂಧಿಸಿದ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ, ಹಾಗೂ ಬಳಕೆ, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರಗಳ ಬಗ್ಗೆ ಮಾಹಿತಿ, ಮೊಲ, ಕುರಿ, ಹಂದಿ ಸಾಕಾಣಿಕೆ ಹಾಗೂ ಸಾಕು ಪಕ್ಷಿಗಳ ಬಗ್ಗೆ ಮಾಹಿತಿ, ಕೋಳಿ ಸಾಕಾಣಿಕೆ: ನಾಟಿ ಕೋಳಿಗಳು ಮತ್ತು ವಿವಿಧ ತಳಿಗಳ ಕೋಳಿಗಳು, ಕೆರೆಗಳ ಮಹತ್ವ ಮತ್ತು ಅದನ್ನು ಉಳಿಸುವ ಬಗ್ಗೆ ಮಾಹಿತಿ ಈ ಎಲ್ಲಾ ಮಾಹಿತಿಗಳು ಸಂಘದ ರೈತ ಸದಸ್ಯರಿಗೆ ನೀಡಲಾಯಿತು.

Leave a Comment

error: Content is protected !!