ಮಾನವೀಯತೆ ಮೆರೆದ ಪಿಕಪ್ ಮಾಲಕ ಸಲೀಂ ಕೊಯ್ಯುರ್

Suddi Udaya

ಬೆಳ್ತಂಗಡಿ: ಇಂದು ಮುಂಜಾನೆ ಪ್ರಕಾಶ್ ಎಂಬುವವರ ಮೊಬೈಲ್ ಪರಪ್ಪು- ಕೊಯ್ಯುರು ರಸ್ತೆ ಮಧ್ಯೆ ಕಳೆದು ಹೋಗಿದ್ದು, ಈ ಮಾರ್ಗವಾಗಿ ಸಂಚರಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸಲೀಂ ಕೊಯ್ಯುರು ಎಂಬುವವರಿಗೆ ಸಿಕ್ಕಿದ್ದು ತಕ್ಷಣವೇ ವಾಟ್ಸಾಪ್ ಸಂದೇಶ ರವಾಣಿಸಿರುತ್ತಾರೆ. ಇದನ್ನು ಅರಿತ ಮೊಬೈಲ್ ಫೋನಿನ ವಾರಸುದಾರನಾದ ಪ್ರಕಾಶ್ ಅವರು ಸಲೀಂ ಅವರನ್ನು ಸಂಪರ್ಕಿಸಿದ್ದು ಸ್ನೇಹ-ಸಂಗಮ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರ ಸಮ್ಮುಖದಲ್ಲಿ ವಾರಸುದಾರನಿಗೆ ಹಸ್ತಾಂತರಿಸಿದ್ದಾರೆ. ಸಲೀಂ ಇವರ ಮಾನವೀಯ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು*

Leave a Comment

error: Content is protected !!