April 8, 2025
ಶಾಲಾ ಕಾಲೇಜು

ವಿದ್ವತ್ ಪಿಯು ಕಾಲೇಜಿನಲ್ಲಿ ” ವಿಜ್ ವರ್ಲ್ಡ್- 2024″ ಸ್ಪರ್ಧೆ

ಬೆಳ್ತಂಗಡಿ: ವಿದ್ವತ್ ಪಿಯು ಕಾಲೇಜಿನಲ್ಲಿ” ವಿಜ್ ವರ್ಲ್ಡ್- 2024″ ಸ್ಪರ್ಧೆ ಇಂದು ನಡೆಯಿತು. ಟಿವಿಯಲ್ಲಿ ಪ್ರಸ್ತುತ ಪಡಿಸುವ ಹಾಗೆಯೇ ಒಂದು ಗಂಟೆಯ ಸುದ್ದಿ ಪ್ರಸ್ತುತಪಡಿಸುವನೇರ ಪ್ರಸಾರದ ಸ್ಪರ್ಧೆ ಇದಾಗಿದ್ದು ಸ್ಪರ್ಧೆಯಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ವಿದ್ವತ್ ಮೀಡಿಯಾ ವಾಹಿನಿ ಹಾಗೂ ವಿದ್ವತ್ ಟೈಮ್ ವಾಹಿನಿಗಳಾಗಿ ಭಾಗವಹಿಸಿದ್ದರು.

ಈ ಒಂದು ಗಂಟೆಯ ಸುದ್ದಿ ಪ್ರಸ್ತುತ ಪಡಿಸುವ ಸ್ಪರ್ಧೆಯಲ್ಲಿ ಸುದ್ದಿ ನಿರೂಪಕರು, ವರದಿಗಾರರು, ಸುದ್ದಿ ವಿಶ್ಲೇಷಕರು, ಚರ್ಚೆ ನಡೆಸಿಕೊಡುವವರು ಹಾಗೂ ಚರ್ಚೆಯಲ್ಲಿ ಭಾಗವಹಿಸುವ ವಿಷಯ ತಜ್ಞರು ಸೇರಿ ಒಟ್ಟು 10 ವಿದ್ಯಾರ್ಥಿಗಳು ಪ್ರತೀ ತಂಡದಲ್ಲಿದ್ದರು. ಡಿಜಿಟಲ್ ತಂತ್ರಜ್ಞಾನ ಬಳಸಿ, ಕಾಲೇಜಿನ ಡಿಜಿಟಲ್ ಬೋರ್ಡ್ನಲ್ಲಿ ಪ್ರಸ್ತುತ ಪಡಿಸಿದ ಈ ಪ್ರಸಾರ ಒಂದು ಟಿವಿ ಮಾಧ್ಯಮ ಒಂದು ಗಂಟೆಯ ನ್ಯೂಸ್‌ನಲ್ಲಿ ಯಾವೆಲ್ಲಾ ಅಂಶಗಳನ್ನು ಹೊರತ್ತರುತ್ತದೆಯೋ ಆ ಎಲ್ಲಾ ಅಂಶಗಳನ್ನು ಒಳಗೊಂಡಿತ್ತು. ಒಂದು ಗಂಟೆಯ ಈ ಪ್ರಸ್ತುತಿ ಯಾವ ಪ್ರತಿಷ್ಠಿತ ಸುದ್ದಿ ವಾಹಿನಿಗೂ ಕೂಡ ಯಾವ ರೀತಿಯಲ್ಲೂ ಕಡಿಮೆಯಿರಲಿಲ್ಲ. ನೆರೆದಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ ಈ ಕಾರ್ಯಕ್ರಮ ವ್ಯಕ್ತಿತ್ವ ವಿಕಸನಕ್ಕೆ ಹಿಡಿದ ಕನ್ನಡಿಯಂತಿತ್ತು.

ಪ್ರತೀ ಸ್ಪರ್ಧಿಯು ಮಾತನಾಡುವ ಬಗೆ ಅವರ ಸ್ಪಷ್ಠತೆ, ವಿಷಯ ಮಂಡನೆ, ಮುಂತಾದವುಗಳ ಸಂಪೂರ್ಣ
ತರಬೇತಿಯನ್ನ ಇನ್‌ಫೈರ್ ವಿದ್ವತ್ ಪೋರಂವಹಿಸಿಕೊಂಡು ವೃತ್ತಿಪರತೆ ಹಾಗೂ ಸ್ಪರ್ಧಾತ್ಮಕ ಆಯಾಮ ನೀಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಈ ವಿದ್ವತ್‌ ವಿಜ್ ವರ್ಲ್ಡ್ – 2024″ ಒಂದು ರಚನಾತ್ಮಕ ಹಾಗೂಕ್ರಿಯಾಶೀಲ
ಚಟುವಟಿಕೆಯಾಗಿದ್ದು ವಿದ್ವತ್ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಬಹುದೊಡ್ಡ ವೇದಿಕೆಯಾಗಿದೆ
ಎಂದು ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ಪ್ರತಿಕ್ರಿಯಿಸಿದ್ದಾರೆ. ಸಂಸ್ಥೆಯ ಟ್ರಸ್ಟಿ ಎಂ.ಕೆ ಕಾಶಿನಾಥ್ ಹಾಗೂ ಶೈಕ್ಷಣಿಕ ನಿರ್ದೇಶಕರಾದ
ಗಂಗಾಧರ ಇಮಂಡಗಳಲೆ ಹಾಗೂಪ್ರಾಂಶುಪಾಲರು ಎಲ್ಲಾ
ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Related posts

ಆ.12: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಎಂಜಿಐಆರ್ ಐ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ರಾಷ್ಟ್ರಮಟ್ಟದ ಜಾಗೃತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ತ್ರಿವಳಿ ಸಂಭ್ರಮ

Suddi Udaya

ಪುಂಜಾಲಕಟ್ಟೆ ಕೆ.ಪಿ.ಎಸ್. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ರೆಖ್ಯ : ಶೌರ್ಯ ವಿಪತ್ತು ಸ್ವಯಂ ಸೇವಕ ತಂಡದಿಂದ ನೆಲ್ಯಡ್ಕ ಶಾಲೆಯಲ್ಲಿ ಕೈತೋಟ ನಿರ್ಮಾಣ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ರೂ. 1.65 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ