30.2 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

ಬೆಳ್ತಂಗಡಿ : ಯುಗಾದಿ ನವ ಪಲ್ಲವಕೆ ನಾಂದಿ ತಂಡದಿಂದ ಅ.20 ರಂದು ಧರ್ಮಸ್ಥಳದ ಗ್ರಾ.ಪಂ ಸಮುದಾಯ ಭವನ (ನೇತ್ರಾವತಿ ಸಭಾಂಗಣ)ದಲ್ಲಿ ಸ್ನೇಹಕೂಟ ನಡೆಯಲಿರುವುದು.

ಸ್ನೇಹಕೂಟದ ಉದ್ಘಾಟನೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ವಿಜಯ ಕುಮಾರ್ ಜೈನ್ ಅಳದಂಗಡಿ ನೆರವೇರಿಸಲಿದ್ದಾರೆ. ಹಿರಿಯ ಸಾಹಿತಿಗಳಾದ, ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಶ್ಯಾಮಲಾ ಗೋಪಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಉಪಸ್ಥಿತಿ ಹಿರಿಯ ಸಾಹಿತಿಗಳಾದ ಪೆರ್ಮುಖ ಸುಬ್ರಹ್ಮಣ್ಯ ಭಟ್, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀಮತಿ ಕಲಾವತಿ ಪ್ರಕಾಶ್, ಶರಣ ಬಸಪ್ಪ ಕುಂಬಾರ್,ಶ್ರೀಮತಿ ಡಾ.ಶ್ವೇತಾ ಪ್ರಕಾಶ್, ಹೆಚ್.ಡಿ.ದಿವಾಕರ್, ಭಾಗವಹಿಸಲಿದ್ದಾರೆ.

ಶ್ರೀಮತಿ ಜ್ಞಾನೇಶ್ವರಿ ಉಡುಪ ಮತ್ತು ಶ್ರೀಮತಿ ಸೌಮ್ಯ ಗುರು ಕಾರ್ಲೆ ಯುಗಾದಿ ಧ್ಯೇಯ ಗೀತೆ ಗಾಯನ ಮಾಡಲಿದ್ದಾರೆ.


ಈ ಸಂದರ್ಭದಲ್ಲಿ ಹಲವಾರು ಸಾಹಿತಿಗಳ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಮಾರಂಭದ ವ್ಯವಸ್ಥಾಪಕರಾದ
ಬೆಳ್ತಂಗಡಿ ತಾಲೂಕಿನ ಆಶಾ ಅಡೂರ್, ಶ್ರೀಮತಿ ಶ್ರೀಲತಾ ಭಾರ್ಗವ,ಶ್ರೀಮತಿ ವೀಣಾ ಉಮೇಶ್,ಶ್ರೀಮತಿ ಸುಜಾತ ಭಟ್, ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಲಿದ್ದಾರೆ. ಆಡಳಿತ ಮಂಡಳಿಯ ಎಂದು ಯುಗಾದಿ ನವ ಪಲ್ಲವಕೆ ನಾಂದಿ ಆಡಳಿತ ಮಂಡಳಿಯ ಶ್ರೀನಾಗ್ ಪಿ.ಎಸ್.ಹೊನ್ನಾವರ ತಿಳಿಸಿದ್ದಾರೆ.

Related posts

ಕರಂಬಾರು ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಮಕ್ಕಳ ಮೆಟ್ರಿಕ್‌ ಮೇಳ ಕಾರ್ಯಕ್ರಮ

Suddi Udaya

ಮಚ್ಚಿನ ಸ.ಉ.ಹಿ.ಪ್ರಾ. ಶಾಲಾ ಎಸ್. ಡಿ ಎಮ್ ಸಿ ನೂತನ ಸಮಿತಿ ರಚನೆ

Suddi Udaya

ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಪ್ರೌಢಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಕೊಕ್ಕಡ: ಯುವಕ ಸಂಶಯಾಸ್ಪದ ಸಾವು: ಪೊಲೀಸರ ತನಿಖೆ

Suddi Udaya

ತೆಕ್ಕಾರು ಪ್ರಾ.ಕೃ.ಪ. ಸ. ಸಂಘದ ಉಪಾಧ್ಯಕ್ಷ ನಾಭಿರಾಜ್ ಹೆಗ್ಡೆ ನಿಧನ

Suddi Udaya

ಉಜಿರೆ ಅನುಗ್ರಹ ಆಂ.ಮಾ. ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!