24.4 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಮುಗೇರಡ್ಕ: ಮೂವರು ದೈವಗಳ ದೈವಸ್ಥಾನ ಮುಗೇರಡ್ಕದ ವಾರ್ಷಿಕ ನೇಮೋತ್ಸವ ಮಕರ ಸಂಕ್ರಮಣದಂದು ಗೊನೆ ಮಹೂರ್ತವಾಗಿ ಜ. 18ಕ್ಕೆ ಕೋಳಿಗೂಟ, ಜ.22 ನೇ ರಾತ್ರಿ ಅಂತರ ಮತ್ತು ದೇವಸ್ಯ ಬಂಡಾರ ಮನೆಯಿಂದ ಮುಗೇರಡ್ಕ ಕ್ಷೇತ್ರಕ್ಕೆ ದೈವದ ಭಂಡಾರ ಆಗಮಿಸಿದ ನಂತರ ಶಿರಾಡಿ ದೈವಕ್ಕೆ ಹೊಸದಾಗಿ ನಿರ್ಮಾಣ ಮಾಡಿದ ಹುಲಿ ಬಂಡಿ ಒಪ್ಪಿಸುವ ಕಾರ್ಯಕ್ರಮ ಮದ್ಯ ರಾತ್ರಿ ಜರುಗಿತು.

ನಂತರ ದೈವಂಕುಲು, ಬಿರ್ಮೆರ್, ಕುಮಾರ, ಗಿಳಿರಾಮ, ಬಸ್ತಿನಾಯ್ಕ ಇನ್ನಿತರ ಪರಿವಾರ ದೈವಗಳ ನೇಮ ಕಾರ್ಯ ನಡೆಯಿತು. ಜ.23ರಂದು ಕಲ್ಕುಡ ದೈವ ಪಿಲಿಚಾಮುಂಡಿ ದೈವ ಹಾಗೂ ಶಿರಾಡಿ ದೈವದ ಗಗ್ಗರ ಸೇವೆ ಆರಂಭವಾಗಿ ದಿನವಿಡೀ ದೈವದ ಸೇವೆಗಳು ನಡೆಯಿತು.

ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಮನದ ಕೋರಿಕೆಗಳನ್ನು ಪ್ರಾರ್ಥನೆ ಮಾಡಿ ಹರಕೆ ಒಪ್ಪಿಸಿ ದೈವದ ಗಂಧ ಪ್ರಸಾದ ಸ್ವೀಕಾರ ಮಾಡಿದರು. ಕ್ಷೇತ್ರದಲ್ಲಿ ನಡೆಯುವ ಮಹಾ ಅನ್ನ ಸಂತರ್ಪಣೆ ಕಾರ್ಯದಲ್ಲಿ 15000 ಕ್ಕೂ ಮಿಕ್ಕಿ ಭಕ್ತರು ಅನ್ನ ಪ್ರಸಾದ ಸ್ವೀಕಾರ ಮಾಡಿ ದೈವದ ಕೃಪೆಗೆ ಪಾತ್ರರದರು.

ಈ ನೇಮೋತ್ಸವಕ್ಕೆ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೋಟ್ಯಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಬೆಳ್ತಂಗಡಿ, ಮಾಜಿ ಶಾಸಕರು ಆದ ಸಂಜೀವ ಗೌಡ ಪುತ್ತೂರು, ಕಿರಣ್ ಚಂದ್ರ ಪುಷ್ಪಗಿರಿ, ಹಾಗೂ ಅನೇಕ ದೈವಸ್ಥಾನ ಮತ್ತು ದೇವಸ್ಥಾನ ದ ಆಡಳಿತದಾರರು ಭಾಗವಹಿಸಿದರು.

Related posts

ಪುದುವೆಟ್ಟು: ಪತ್ರಕರ್ತ ಭುವನೇಂದ್ರ ನಿಧನ

Suddi Udaya

ಬಿಜೆಪಿ ಕೊಕ್ಕಡ 237ನೇ ಬೂತು ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್, ಕಾರ್ಯದರ್ಶಿಯಾಗಿ ಶ್ರೀಧರ್ ಆಯ್ಕೆ

Suddi Udaya

ಮೊಗ್ರು: ಕರಂಬಾರುವಿನಲ್ಲಿ ಕಾಡಾನೆ ಪ್ರತ್ಯಕ್ಷ: ನೇತ್ರಾವತಿ ನದಿಯಲ್ಲಿ ಜಳಕ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya

ತಾಲೂಕು ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀರಕ್ಷ ದ್ವಿತೀಯ ಸ್ಥಾನ

Suddi Udaya
error: Content is protected !!