ಉಜಿರೆ: ನೀವು ಉದ್ಯಮಶೀಲರಾಬೇಕಾದರೆ ಸಂವಹನ ಕೌಶಲ್ಯ ಇರಬೇಕು, ಒಬ್ಬ ಉದ್ಯಮಿ ಉದ್ಯಮದ ಲಾಭ-ನಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಇರಬೇಕು. ನೀವು ಆರಂಭಿಸುವ ಉದ್ಯಮಕ್ಕೆ ಒಂದು ಸರಿಯಾದ ದೃಷ್ಟಿಕೋನ ಇರಬೇಕು. ಪ್ರಾಮಾಣಿಕತೆ ಇರಬೇಕು. ನಿಮ್ಮ ಸ್ವಷ್ಟವಾದ ಗುರಿ, ಉದ್ದೇಶ ಇದ್ದು, ನೀವು ಪ್ರಾಮಾಣಿಕರಾಗಿದ್ದರೆ ನಿಮಗೆ ಬೇರೆ ಬೇರೆ ಮೂಲಗಳಿಂದ ಹಣಕಾಸು ನೆರವು ಬರುತ್ತದೆ. ಇದರ ಜೊತೆಗೆ ಹಣಕಾಸಿನ ನಿರ್ವಹಣೆ ಅಂದರೆ ಸರಿಯಾದ ಲೆಕ್ಕಚಾರ ನೀವು ಇಟ್ಟುಕೊಳ್ಳಬೇಕು. ಇನ್ನು ಉದ್ಯಮಕ್ಕೆ ಬೇಕಾಗುವ ಕೆಲಸಗಾರನ್ನು ನೇಮಿಸಿಕೊಳ್ಳವಾಗ ಅಭ್ಯರ್ಥಿಯ ಮನೋಭಾವನೆಯನ್ನು ನೋಡಿಕೊಂಡು ಆಯ್ಕೆ ಮಾಡಿಕೊಳ್ಳಿ. ಹಂತ ಹಂತವಾಗಿ ಬಂಡವಾಳವನ್ನು ತೊಡಗಿಸಿಕೊಂಡು ಮುಂದುವರೆಯರಿ. ಉದ್ಯಮಶೀಲರಾಗಬೇಕಾದರೆ ಕೇವಲ ಜ್ಞಾನ ಅಥವಾ ಐದಿಯಾ ಇದ್ದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರುವ ಜಾಣ್ಮೆ ಇರಬೇಕು. ಉದ್ಯಮದ ಮೊದಲ ಗ್ರಾಹಕರನ್ನು ಯಾವುತ್ತೂ ಮರೆಯಬೇಡಿ ಯಾಕೆಂದರೆ ಅವರು ನಿಮ್ಮ ಮೇಲೆ ಮೊದಲು ನಂಬಿಕೆ ಇಟ್ಟಿವರು ಎಂದು ನಿಡ್ಲೆ ಅಗ್ರಿಲೀಫ್ ಎಕ್ಸಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ನ ಮ್ಯಾನೆಜಿಂಗ್ ಡೈರೆಕ್ಟರ್ ಅವಿನಾಶ್ ರಾವ್ ಅಭಿಪ್ರಾಯಪಟ್ಟರು.
ಅವರು ಉಜಿರೆ ರುಡ್ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆದ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅಶೋಕ ಕುಮಾರ್ ಮಾತನಾಡಿ ಸ್ವ ಉದ್ಯೋಗಕ್ಕೆ ಬೇಕಾದ ಮಾಹಿತಿ ಮಾರ್ಗದರ್ಶನ ನೀಡಿದ ರುಡ್ ಸೆಟ್ ಸಂಸ್ಥೆಯ ಕಾರ್ಯವನ್ನು ಅಭಿನಂದಿಸಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಡಿ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನವನ್ನು ಸಹ ನೆನಪಿಸಿಕೊಂಡು.
ಕು. ಕೀರ್ತನಾ ಮತ್ತು ಕು. ಪ್ರತಿಷ್ಟಾ ಪ್ರಾರ್ಥಿಸಿದರು. ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರುಗಳಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಕೆ. ಕರುಣಾಕರ ಜೈನ್ ವಂದಿಸಿದರು. ಸುಮಾರು ೩೩ ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು.