April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ : ಕಾಂಗ್ರೆಸ್ ಪಕ್ಷದ ಕಳಿಯ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಸತೀಶ್ ನಾಯ್ಕ್ ನಾಳ ಆಯ್ಕೆ. ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಭಾಗಿ

ಕಳಿಯ ಗ್ರಾಮ ಪಂಚಾಯತ್ ನ ಕಳಿಯ ಮತ್ತು ನ್ಯಾಯತರ್ಪು ಗ್ರಾಮದ ಐದು ಬೂತನ್ನೊಳಗೊಂಡ ಪಂಚಾಯತ್ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸಿಗ ಕಳಿಯ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರೂ,ಕಳಿಯ ಸಿ.ಎ.ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾಗಿದ್ದ ಅಡೂರು ಸತೀಶ್ ನಾಯ್ಕ್ ನಾಳ ಆಯ್ಕೆ ಆಗಿದ್ದಾರೆ.


ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಆಗಮಿಸಿದ್ದರು. ಹಾಗೂ ಉಪಾದ್ಯಕ್ಷರುಗಳಾಗಿ ಪ್ರದೀಪ್ ಕುಮಾರ್ ಪೇರಾಜೆ, ರಶೀದ್ ಪರಿಮ, ನೇವಿಲ್ ಮೊರಾಸ್, ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್ ಗೌಡ ಕೆರೆಕೋಡಿ, ಶ್ರೀಮತಿ ಶ್ವೇತಾ, ನೌಷದ್ ಜಿ, ಕಾರ್ಯದರ್ಶಿಗಳಾಗಿ ಶ್ರೀಮತಿ ಪುಷ್ಪಾ ಎಸ್ ನಾಯ್ಕ, ಸುಮಲತಾ ಬಟ್ಟೆಮಾರು, ನಾಸಿರ್ ನಡತೊಟ್ಟು ಆಯ್ಕೆಯಾದರು.

ಬೂತ್ ಸಮಿತಿಯ ಅಧ್ಯಕ್ಷರುಗಳಾಗಿ ಕಳಿಯ ಒಂದನೇ ಬ್ಲಾಕ್ ಗೆ ರಹಿಮಾನ್ ಮಾಸ್ಟರ್, ಎರಡನೇ ಬ್ಲಾಕ್ ಗೆ ಸಿದ್ದೀಕ್ ಜಿ ಎಚ್, ಮೂರನೇ ಬ್ಲಾಕ್ ಗೆ ಸೋಮನಾಥ್ ಇಡ್ಯ ಹಾಗೂ ನ್ಯಾಯತರ್ಪು ಗ್ರಾಮದ ಒಂದನೇ ಬ್ಲಾಕ್ ಗೆ ಹರೀಶ್ ನಾಳ, ಎರಡನೇ ಬ್ಲಾಕ್ ಗೆ ಆಸಿಫ್ ಪಳ್ಳಾದೆ ಆಯ್ಕೆಯಾದರು. ಸಭೆಯು ಪರಪ್ಪು ನೇವಿಲ್ ಮೊರಾಸ್ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಅಬ್ಬುಲ್ ಕರೀಮ್, ರಾಘವ ಎಚ್,ಸತೀಶ್ ನಾಯ್ಕ್ ,ಲತೀಫ್ ಪರಿಮ, ಇಸ್ಮಾಯಿಲ್ ಪಳ್ಳಾದೆ, ನೇವಿಲ್ ಮೊರಾಸ್, ಶ್ರೀಮತಿ ಮರೀಟಾ ಪಿಂಟೋ, ಶ್ರೀಮತಿ ಮೋಹಿನಿ, ಶ್ರೀಮತಿ ಪುಷ್ಪಾ,ಸೋಮನಾಥ ಇಡ್ಯ,ಉಮರಬ್ಬ ಜಾರಿಗೆಬೈಲು, ಬೊಮ್ಮಣ್ಣ ಗೌಡ, ಆಸಿಫ್ ಪಳ್ಳಾದೆ, ರಹಿಮಾನ್ ಮಾಸ್ಟರ್, ಹರೀಶ್ ನಾಳ ಹಾಜರಿದ್ದರು.

Related posts

ಮದ್ದಡ್ಕ ಶ್ರೀರಾಮ ಸೇವಾ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಇಳಂತಿಲ ಗ್ರಾಮದ ಪೆದಮಲೆ ಕುಟ್ಟಿಕಳ ಅಜಿಲಮೊಗರು ನಾವೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ಮನವಿ

Suddi Udaya

ನಡ್ವಾಲ್ ಸಿರಿ ಜಾತ್ರೋತ್ಸವ ಪ್ರಯುಕ್ತ ಶ್ರೀ ಕ್ಷೇ. ಧ.ಗ್ರಾ. ಯೋಜನೆ ಗುರಿಪಳ್ಳ ಒಕ್ಕೂಟದ ವತಿಯಿಂದ ಶ್ರಮದಾನ ಕಾರ್ಯ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಬೆಳ್ತಂಗಡಿ ಕೇಂದ್ರ ಖಿಳರ್ ಜುಮ್ಮಾ ಮಸೀದಿಯಲ್ಲಿ ವಿಜೃಂಭಣೆಯ ಬಕ್ರೀದ್ ಆಚರಣೆ

Suddi Udaya

ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ, ಶಾಲೆಗಳಿಗೆ ಸಾವಯವ ಗೊಬ್ಬರ ವಿತರಣೆ

Suddi Udaya
error: Content is protected !!