25.7 C
ಪುತ್ತೂರು, ಬೆಳ್ತಂಗಡಿ
April 22, 2025
Uncategorized

ಅರಿಕೆಗುಡ್ಡೆಯಲ್ಲಿ ನೂತನ ಸಭಾಭವನ ಉದ್ಘಾಟನೆ : ಸುಬ್ರಹ್ಮಣ್ಯ ಶ್ರೀಗಳಿಂದ ಸಭಾಭವವನ್ನು ದೀಪ ಬೆಳಗಿಸಿ , ಉದ್ಘಾಟಿಸಿ ನಾಮಫಲಕ ಅನಾವರಣ

ಅರಸಿನಮಕ್ಕಿ : ಆಕರ್ಷಣೆಯಿಂದ ಗಳಿಸಿದ್ದು ತಾತ್ಕಾಲಿಕ. ಸಂಸ್ಕಾರ, ಧರ್ಮ ಮತ್ತು ಸಂಸ್ಕೃತಿಯ ಆಚರಣೆಯಿಂದ ಸರ್ವಕಾಲಕ್ಕೂ ಸುಖ, ನೆಮ್ಮದಿಯನ್ನು ಪಡೆಯಬಹುದು ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ಟಾಮೀಜಿ ಹೇಳಿದರು.
ಅವರು ಹತ್ಕಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುಗ೯ಕ್ಷೇತ್ರದಲ್ಲಿ “ವನದುರ್ಗ” ಸಭಾಭವವನ್ನು ದೀಪ ಬೆಳಗಿ, ನಾಮಫಲಕ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.

ಕೆಲವೊಂದೆಡೆ ಕಲ್ಯಾಣ ಮಂಟಪಗಳು ರೆಸಾರ್ಟ್ ಅಥವಾ ದೈವಿಕತೆಯ ಸ್ಪರ್ಶವಿಲ್ಲದ ಜಾಗಗಳಲ್ಲಿ ನಡೆಯುವುದಿದೆ. ಆದರೆ ದೈವೀಕ್ಷೇತ್ರದ ಪಕ್ಕದಲ್ಲಿ ಸುಂದರ, ವಿಶಾಲವಾದ ಸಭಾಭವನ ನಿರ್ಮಾಣ. ಮಾಡಿರುವುದು ಒಳ್ಳೆಯದು. ಇದರಿಂದ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ದೈವೀ ಸ್ಪರ್ಶ, ದೇವತಾನು ಗ್ರಹವೂ ಸಿಗಲಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ದೇವಸ್ಥಾನದ ಈ ಸಭಾಭವನದಲ್ಲಿ ಧರ್ಮ ಶಿಕ್ಷಣದ ಕೆಲಸಗಳು ನಡೆಯಬೇಕಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಕಲಿಕೆ ಮೊದಲಾದ ಸಂಸ್ಕಾರದ ಶಿಕ್ಷಣ ನೀಡಬೇಕು. ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸು ವಂತಾಗಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೆ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ 50 ಲಕ್ಷ ಅನುದಾನ ನೀಡಿದ್ದು ಈ ಬಾರಿ ಮತ್ತೆ 5 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಅರಿಕೆಗುಡ್ಡೆ ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿ ಕೆಲಸಗಳನ್ನು ಭಕ್ತರು ಶ್ರಮದಾನದಿಂದ ಮಾಡುತ್ತಿರುವುದು ಮಾದರಿ. ಧರ್ಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.

ಬೆಂಗಳೂರಿನ ಜ್ಯೋತಿಷಿ ಪ್ರಹ್ಲಾದ ತಾಮ್ಹನ್ಕರ್, ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್, ಅರಸಿನಮಕ್ಕಿ ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ಮಾತನಾಡಿದರು.
ಸಭಾಭವನದ ಶ್ರಮದಾನಿಗಳಾದ ಸಂಜೀವ ಶೆಟ್ಟಿಗಾರ್, ತಮ್ಮಯ್ಯ ಶೆಟ್ಟಿಗಾರ್, ರಾಮಕೃಷ್ಣ ಶೆಟ್ಟಿಗಾರ್, ಸುರೇಶ್ ಶೆಟ್ಟಿಗಾರ್, ರೋಹಿತಾಶ್ವ ಶೆಟ್ಟಿಗಾರ್, ಗಣೇಶ್ ಶೆಟ್ಟಿಗಾರ್, ರಾಮಪ್ಪ ಶೆಟ್ಟಿಗಾರ್, ಹರಿಶ್ಚಂದ್ರ ಶೆಟ್ಟಿಗಾರ್, ನಾರಾಯಣ ಆಚಾರ್ಯ ಕಲ್ಲಕೋಟೆ, ಆನಂದ ಅಡಪ, ವಸಂತ ಶೆಟ್ಟಿಗಾರ್ರವರನ್ನು ಗೌರವಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಕ್ಷೇತ್ರದ ಅರ್ಚಕ ಉಲ್ಲಾಸ್ ಭಟ್ ಅಂತರ, ಉದ್ಯಮಿಗಳಾದ ಶ್ರೀರಂಗ ದಾಮ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೀತಾ, ಪ್ರಮೀಳಾ, ರೇಷ್ಮಾ, ಧನವತಿ ಪ್ರಾಥಿ೯ಸಿದರು. ಅರಿಕೆಗುಡ್ಡೆ ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಮಂಜುಶ್ರೀ ಸೀನಿಯರ್ ಚೇಂಬರ್ ಪೂರ್ವಧ್ಯಕ್ಷರಾದ ಪ್ರಥ್ವಿರಂಜನ್ ರಾವ್’ರವರ ಶ್ರದ್ಧಾಂಜಲಿ ಸಭೆ

Suddi Udaya

ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಕಲಿಕೆಯಲ್ಲಿ ಕಲೆ’ ಕಾರ್ಯಾಗಾರ

Suddi Udaya

ಬೆಳ್ತಂಗಡಿ :ರಿಕ್ಷಾ ಚಾಲಕ ನೀಲಯ್ಯ ಗೌಡ ನಿಧನ

Suddi Udaya

ಸುಲ್ಕೇರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಾಮ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರಿನಲ್ಲಿ ಬಂಧಿಸಿದ ಬೆಳ್ತಂಗಡಿ ಪೊಲೀಸ್ ತಂಡ

Suddi Udaya

ಮಂಜುಶ್ರೀ ಸೀನಿಯರ್ ಚೇಂಬರ್ ಬೆಳ್ತಂಗಡಿ ನಿಂದ ಕಾರ್ಗಿಲ್ ವಿಜಯ‌ ದಿವಸ್

Suddi Udaya
error: Content is protected !!