29.1 C
ಪುತ್ತೂರು, ಬೆಳ್ತಂಗಡಿ
June 7, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಮಸ್ಯೆ

ನೈನಾಡು ಅಂಗನವಾಡಿ ಕೇಂದ್ರಕ್ಕೆ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದು ಹಾನಿ

ಬೆಳ್ತಂಗಡಿ: ಪಿಲಾತಬೆಟ್ಟು ಗ್ರಾಮದ ನೈನಾಡು ಅಂಗನವಾಡಿಗೆ ಹಿಂಭಾಗದ ಸಂತ ಜೋಸೆಫರ ಅನುದಾನಿತ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಅಂಗನವಾಡಿಯ ಒಂದು ಪಾರ್ಶ್ವದ ಗೋಡೆಗೆ ಭಾಗಶಃ ಹಾನಿಯಾಗಿದೆ.

ಅಂಗನವಾಡಿಯ ಗೋಡೆಯಲ್ಲಿ ಬಿರುಕು ಉಂಟಾಗಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಅಂಗನವಾಡಿಯನ್ನು ಸದ್ಯದ ಮಟ್ಟಿಗೆ ಹತ್ತಿರದ ಶ್ರೀರಾಮ ಭಜನಾ ಮಂದಿರದ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ.

ಅಂಗನವಾಡಿಯ ದಾಖಲೆ ಪುಸ್ತಕಗಳನ್ನು, ಕಪಾಟು, ಅಡುಗೆ ಸರಂಜಾಮುಗಳನ್ನು ಶ್ರೀರಾಮ ಯುವಕ ಸಂಘ ಹಾಗೂ ಭಜನಾ ಮಂದಿರದ ಸದಸ್ಯರ ಸಹಕಾರದಿಂದ ಭಜನಾ ಮಂದಿರದ ಸಭಾ ಭವನಕ್ಕೆ ಸಾಗಿಸಲಾಯಿತು.

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ರತ್ನಾಕರ್, ಸದಸ್ಯ ಲಕ್ಷ್ಮೀನಾರಾಯಣ ಹೆಗ್ಡೆ ನಿನ್ಯಾಲು ಹಾಗೂ ಅಂಗನವಾಡಿ ಶಿಕ್ಷಕಿಯವರ ಕೋರಿಕೆಗೆ ಶ್ರೀ ರಾಮ ಭಜನಾ ಮಂದಿರದವರು ತಕ್ಷಣ ಸ್ಪಂದನೆ ನೀಡಿದ್ದಾರೆ.

ನೈನಾಡು ಪರಿಸರದಲ್ಲಿ ಬಹಳಷ್ಟು ವರ್ಷಗಳಿಂದ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದ್ದು ಸದರಿ ಅಂಗನವಾಡಿಗೆ ನೂತನ ಕಟ್ಟಡವು ಮಂಜೂರಾಗಿದ್ದು ಹತ್ತಿರದ ಶ್ರೀರಾಮ ಯುವಕ ಸಂಘಕ್ಕೆಂದು ಕಾದಿರಿಸಲಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.
ನೂತನ ಕಟ್ಟಡವು ಭಾಗಶಃ ಪೂರ್ಣಗೊಂಡಿದ್ದು, ನೆಲಹಾಸು, ಕಿಟಕಿ ಬಾಗಿಲು, ವಿದ್ಯುತ್ ಸಂಪರ್ಕಗಳು ಇನ್ನಷ್ಟೇ ಆಗಬೇಕಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಆದಷ್ಟು ಬೇಗ ಗಮನ ಹರಿಸಿ ನೂತನ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ತ್ವರಿತವಾಗಿ ಸಾಗುವಂತೆ ಮಾಡಬೇಕೆಂದು ಊರವರ ಒಕ್ಕೊರಲಿನ ಮನವಿ. ಈ ಬಗ್ಗೆ ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವ ಗುತ್ತಿಗೆದಾರರಲ್ಲಿ ಮಾತುಕತೆ ನಡೆದಿದ್ದು ಅನುದಾನದ ಕೊರತೆಯಿದೆ ಎಂಬುದಾಗಿ ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ತುರ್ತಾಗಿ ನೂತನ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕಾಗಿದೆ.

Related posts

ಪುದುವೆಟ್ಟು ಶಾಲೆಯಲ್ಲಿ ವಿಜ್ಞಾನ ಮಾದರಿಗಳ ತಯಾರಿಕಾ ಕಾರ್ಯಗಾರ

Suddi Udaya

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆ: ಯಥಾಸ್ಥಿತಿ ಕಾಪಾಡುವಂತೆ ಆದೇಶ

Suddi Udaya

ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ‌ ಸಂಘದಿಂದ ಜಾಗತಿಕ ಔಷಧ ತಜ್ಞರ ದಿನಾಚರಣೆ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ವನದುರ್ಗ ದೇವಿ ಕ್ಷೇತ್ರಕ್ಕೆ ಸೋಲಾರ್ ಅಳವಡಿಸಲು ಕೆನರಾ ಬ್ಯಾಂಕಿನಿಂದ ರೂ 2 ಲಕ್ಷ ಮಂಜೂರು

Suddi Udaya
error: Content is protected !!