
ಇಂದಬೆಟ್ಟು: ಟೀಮ್ ದೇವನಾರಿ ತಂಡದ ವತಿಯಿಂದ ಆರ್ಸಿಬಿ ವಿಜಯೋತ್ಸವ ವಿಶೇಷ ರೀತಿಯಲ್ಲಿ ಆಚರಿಸಲಾಯಿತು* ಅಂಗನವಾಡಿ ಮತ್ತು ದೇವನಾರಿ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಪೆನ್ ಪೆನ್ಸಿಲ್ ಹಾಗೂ ಸಿಹಿ ತಿಂಡಿ ವಿತರಣೆ ಮಾಡುವುದರೊಂದಿಗೆ ಮತ್ತು ಶಾಲಾ ವಠಾರದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಟೀಮ್ ದೇವನರಿ ತಂಡದ ಅಧ್ಯಕ್ಷರಾದ ಗಣೇಶ್ ಆಚಾರ್ಯ ಮುಂಡ್ರಬೆಟ್ಟು ಹಾಗೂ ಕೋಶಾಧಿಕಾರಿ ಶೌಕತ್ ಅಲಿ ಮತ್ತು ಸದಸ್ಯರುಗಳಾದ ಸಂತೋಷ. ಸುಜಯ್. ಅಕ್ಷಯ್ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಉಷಾ ಪಿ. ಇವರು ಸ್ವಾಗತಿಸಿ ಧನ್ಯವಾದಗಳು, ಸಲ್ಲಿಸಿದರು.