24 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕವರದಿ

ಮುಂಡಾಜೆ: ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಸಂಭ್ರಮದ‌ ಬಕ್ರೀದ್ ಆಚರಣೆ-ಸಾಮೂಹಿಕ ಪ್ರಾರ್ಥನೆ

ಬೆಳ್ತಂಗಡಿ: ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಅದ್‌ಹಾ (ಬಕ್ರೀದ್) ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.

ಬೆಳಗ್ಗೆ ಮಸ್ಜಿದ್ ನಲ್ಲಿ ಧರ್ಮ ಗುರುಗಳಾದ ಸಿರಾಜುದ್ದೀನ್ ಸ‌ಅದಿ ಗಡಿಯಾರ್ ಈದ್ ಸಂದೇಶ ನೀಡಿದರು‌. ಬಳಿಕ ಸಾಮೂಹಿಕ ಈದ್ ನಮಾಝ್ ನಡೆಯಿತು.

“ಖುತುಬಾ” ಪಾರಾಯಣ ಬಳಿಕ, ಜಮಾಅತ್ ನಲ್ಲಿ ಮೃತರಾದವರ ಸ್ಮರಣೆಗಾಗಿ ಸಾಮೂಹಿಕವಾಗಿ “ಯಾಸೀನ್” ಪಾರಾಯಣ ನಡೆದು ದುಆ ಪ್ರಾರ್ಥನೆ ಸಲ್ಲಿಸಲಾಯಿತು. ಮಸ್ಲಕ್ ಮದರಸದ ಮುಖ್ಯೋಪಾಧ್ಯಾಯ ತ್ವಾಹಿರ್ ಸ‌ಅದಿ ತಕ್ಬೀರ್ ಗೇ ನೇತೃತ್ವ ನೀಡಿದರು.

ಮಸ್ಜಿದ್ ನಿರ್ಮಿಸಲ್ಪಟ್ಟಿರುವ ಜಮಲುಲ್ಲೈಲಿ ತಂಙಳ್ ಕುಟುಂಬದ ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್, ಸಯ್ಯಿದ್ ಸಿಮಾಕ್ ಜಮಲುಲ್ಲೈಲಿ ತಂಙಳ್, ‌ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಬಶೀರ್ ನೆಕ್ಕರೆ, ಕಾರ್ಯಾಧ್ಯಕ್ಷ ಕೆರೀಂ ಕೆ.ಎಸ್, ಪ್ರ. ಕಾರ್ಯದರ್ಶಿ ಅಬ್ಬಾಸ್ ಸಿ, ಕೋಶಾಧಿಕಾರಿ ಕೆರೀಂ ಕುರುಡ್ಯ ಹಾಗೂ ಪದಾಧಿಕಾರಿಗಳು, ‌ಜಮಾಅತ್ ಬಾಂಧವರು ಭಾಗವಹಿಸಿದ್ದರು.

ಪ್ರಾರ್ಥನೆ ಬಳಿಕ ಎಲ್ಲರೂ ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಖುಷಿ ಹಂಚಿಕೊಂಡರು. ಪಾನೀಯ ಮತ್ತು ಸಿಹಿ ತಿಂಡಿ ವಿತರಿಸಲಾಯಿತು.

Related posts

ವೇಣೂರು ಐಟಿಐಯಲ್ಲಿ ಬೃಹತ್ ರಕ್ತದಾನ ಶಿಬಿರ: 119 ಯುನಿಟ್ ರಕ್ತ ಸಂಗ್ರಹ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಜಿಲ್ಲಾಮಟ್ಟದ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya

ಮಾ. 2: ಮುಗೇರಡ್ಕ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಆಹಾರ ಮೇಳ: ಚಪ್ಪರ ಮೂಹೂರ್ತ

Suddi Udaya

ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದ ರಿಕ್ಷಾ ಮೇಲೆ ಕಾಡುಕೋಣ ದಾಳಿ: ರಿಕ್ಷಾದಲ್ಲಿದ್ದ ಪುತ್ರ ದಿಲ್ಸನ್ ಗೆ ಗಾಯ ತಂದೆ ಡೆನ್ನಿಸ್ ಅಪಾಯದಿಂದ ಪಾರು

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಾಪಿನಡ್ಕ ಶಾಲೆಯಲ್ಲಿ ಬುಲ್ ಬುಲ್ ದಳ ಉದ್ಘಾಟನೆ

Suddi Udaya
error: Content is protected !!