ತೋಟತ್ತಾಡಿ,: ಶ್ರೀ ಸೋಮನಾಥೇಶ್ವರ ದೇವಸ್ಥಾನ ಬೈಲಂಗಡಿ ತೋಟತ್ತಾಡಿ. ಆ.8 ರಂದು ನಡೆಯುವ ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮಕ್ಕೆ ಸಮಿತಿಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿವಾಕರ ಪೂಜಾರಿ ಕಲೆಂಜೊಟ್ಟು ಇವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ ಶ್ರೀಮತಿ ಶೋಭಾ ಗೌಡ ಬಳ್ಳಿ, ಕಾರ್ಯದರ್ಶಿಯಾಗಿ ಶ್ರೀಮತಿ ಶಾರದಾ ಗೌಡ ಪಿತ್ತಿಲು, ಉಪಾಧ್ಯಕ್ಷರಾಗಿ ಶ್ರೀಮತಿ ಉಷಾ ಪೂಜಾರಿ ಡಿ ಮಜಲು, ಭಾರತಿ ಆಚಾರ್ಯ ಮುಂಡೈಲ್, ಶ್ರೀಮತಿ ವಿಶಾಲಾಕ್ಷಿ ಅರಮನೆ, ಶ್ರೀಮತಿ ಅರುಣಾ ಪೊಯ್ಯೇದಡ್ಡ, ಶ್ರೀಮತಿ ಸೀತಾ ನೆಲ್ಲಿಗುಡ್ಡೆ, ಶ್ರೀಮತಿ ಶಾರದಾ ನಾಯ್ಕ ಕೋಟೆ, ಶ್ರೀಮತಿ ಪ್ರೇಮ ಮುಂಡೈಲ್, ಶ್ರೀಮತಿ ನೇತ್ರಾವತಿ ಕೆಮ್ಮಟೆ, ಕೋಶಾಧಿಕಾರಿಯಾಗಿ ಸುಮತಿ ಪೂಜಾರಿ ಬರಮೇಲು, ಜತೆ ಕಾರ್ಯದರ್ಶಿಯಾಗಿ ಸಂಧ್ಯಾ ಗೌಡ ಪರಾರಿ, ಹರ್ಷಿತ ಶೆಟ್ಟಿ ಅರಮನೆ, ಲೀಲಾ ಕುಲಾಲ್ ಕಜೆ. ಸಮಿತಿಯ ಸಲಹೆಗಾರರಾಗಿ ಶ್ರೀಮತಿ ದಮಯಂತಿ ಕಜೆ. ಶ್ರೀಮತಿ ಚಂದ್ರಾವತಿ ಪರಾರಿ, ಇವರನ್ನು ಆಯ್ಕೆ ಮಾಡಲಾಯಿತು.











