ಶಿಶಿಲ : ಜೂ. 25ರಂದು ಸುರಿದ ಬಾರೀ ಮಳೆಗೆ ನೀರಿನೊಂದಿಗೆ ಬಂದ ಮರಗಳು ಶಿಶಿಲ ಕಿಂಡಿ ಆಣೆಕಟ್ಟುವಿನಲ್ಲಿ ಸಿಲುಕಿಕೊಂಡು ನೀರಿನ ಸರಾಗ ಹರಿವಿಗೆ ತೊಡಕ್ಕಾಗಿ ಮಳೆನೀರು ದೇವಸ್ಥಾನಕ್ಕೂ ನುಗ್ಗಿತ್ತು. ಮಳೆ ಕಡಿಮೆಯಾಗಿ ನೀರು ಇಳಿದ ಕೂಡಲೇ ಹಿಟಾಚಿ ಬಳಸಿ ಪಂಚಾಯತ್ ವತಿಯಿಂದ ಕಿಂಡಿ ಆಣೆಕಟ್ಟಿನಲ್ಲಿ ಸಿಲುಕಿದ ಮರಗಳನ್ನು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.







