ಬೆಳ್ತಂಗಡಿ : ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ
ಸ.ಹಿ.ಪ್ರಾ.ಶಾಲೆ ನಡ ಇಲ್ಲಿಗೆ ಕುಡಿಯುವ ನೀರಿನ ಯಂತ್ರ (ಅಕ್ವಾಗಾರ್ಡ್)ಯನ್ನು ಜು.07 ರಂದು ಶಾಲೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ರವಿಕುಮಾರ್ ಭಟ್ ಪಜಿರಡ್ಕ, ಕಾರ್ಯದರ್ಶಿಯಾದ ಕೃಷ್ಣಕುಮಾರ ಐತಾಳ ಪಂಜಿರ್ಪು, ಉಪಾಧ್ಯಕ್ಷ ರಾಘವೇಂದ್ರ ಬಾಂಗಿಣ್ಣಾಯ, ಖಜಾಂಚಿಯಾದ ರಾಜೇಶ ಹೊಳ್ಳ ಮತ್ತು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಭಾಗಿಯಾದರು.













