ಬಾರ್ಯ ಗ್ರಾಮದ ಸುಭಾಷಿನಿ ಮತ್ತು ರೋಹಿನಾಥ್ ಇವರ ಪುತ್ರಿಯಾದ ಕು. ದಿಶಾ ಬಾರ್ಯ ಇವರು ವಾಮಂಜೂರು ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡಿರುತ್ತಾರೆ. ಬಾರ್ಯ ಶ್ರೀ ಮಹಾ ವಿಷ್ಣು ದೇವಸ್ಥಾನದ ಸನ್ನಿಧಿಯಲ್ಲಿ ಮಾಡಿಕೊಂಡ ಸಂಕಲ್ಪದಂತೆ ಉದ್ಯೋಗ ಸಿದ್ಧಿಸಿದ ಕಾರಣ ಪ್ರಥಮ ವೇತನದ ರೂ 50,000 ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಿಸಿದರು.
ಬಾರ್ಯ ಕ್ಷೇತ್ರದಲ್ಲಿ ಭಕ್ತಾದಿಗಳು ಸಲ್ಲಿಸುವಂತಹ ಪ್ರಾರ್ಥನೆಗಳಿಗೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ. ಮದುವೆ ಭಾಗ್ಯ ಸಂತಾನ ಫಲ, ಉದ್ಯೋಗ, ವಿದ್ಯಾಭ್ಯಾಸ ಮೊದಲಾದ ವಿಷಯಗಳಲ್ಲಿ ದೇವರ ಸನ್ನಿಧಿಯಲ್ಲಿ ಮಾಡಿದ ಪ್ರಾರ್ಥನೆ ಸಿದ್ಧಿಸುತ್ತಾ ಬಂದಿರುವುದಕ್ಕೆ ಹಲವು ದೃಷ್ಟಾಂತಗಳಿವೆಯೆಂದು ಕ್ಷೇತ್ರದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿ ಶ್ರೀದೇವರ ಪ್ರಸಾದ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.















