ಬೆಳ್ತಂಗಡಿ ಸಾರ್ವಜನಿಕ ಹಿಂದೂ ರುದ್ರ ಭೂಮಿ ನಿರ್ವಹಣಾ ಸಮಿತಿ ರಚನೆಯು ಶಾಸಕ ಹರೀಶ್ ಪೂಂಜ ಮತ್ತು ಪಟ್ಟಣ ಪಂಚಾಯತಿ ಅಧ್ಯಕ್ಷ ಜಯಾನಂದ ಗೌಡ ರವರ ನೇತೃತ್ವದಲ್ಲಿ ಜು. 7ರಂದು ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಲಾಯಿಲ ಪೈ ಕ್ಯಾರ್ಸ್ ಮಾಲೀಕ ಶಶಿಧರ್ ಪೈ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಇಂಪ್ರೆಷನ್ ಮಾಲಕ ಯಶವಂತ್ ಪಟವರ್ಧನ್, ಕೋಶಾಧಿಕಾರಿಯಾಗಿ ಪ್ರಕಾಶ್ ಎಲೆಕ್ಟ್ರಾನಿಕ್ ಮಾಲಕ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಪದ್ಮ ಕುಮಾರ್, ವಿಶ್ವನಾಥ್ ಶೆಟ್ಟಿ, ಸಂತೋಷ್ ಕುಮಾರ್ ಜೈನ್,
ಜೊತೆ ಕಾರ್ಯದರ್ಶಿಯಾಗಿ ದೀಪಕ್ ರಾಜಕೇಸರಿ, ಆಶಾ ಸತೀಶ್, ಸದಸ್ಯರಾಗಿ ಪಟ್ಟಣ ಪಂಚಾಯತ್ ಬೆಳ್ತಂಗಡಿ ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಲೋಕೇಶ್ ಅಂಬರೀಶ್ , ಜನಾರ್ಧನ್, ಜಗದೀಶ್ ಡಿ, ರಜನಿ ಕುಡ್ವ, ರಾಜಶ್ರೀ ರಮಣ್, ಮುಸ್ತರ್ ಜಾನ್, ನಾಮನಿರ್ದೇಶಕರಾದ ಸತೀಶ್ ಶೆಟ್ಟಿ, ಬಶೀರ್, ಹೆನ್ರಿ ಲೋಬೊ, ಡಾ. ರಮೇಶ್, ತುಕಾರಾಮ್. ಬಿ, ಸತೀಶ್ ರೈ, ಪ್ರಮೋದ್ ಆರ್ ನಾಯಕ್, ಭುಜಂಗ ಶೆಟ್ಟಿ, ನವೀನ್ ಕುಮಾರ್, ಗಣೇಶ್ ಪೈ, ರೊನಾಲ್ಡ್ ಲೋಬೊ, ಮಂಜುನಾಥ್ ರೈ, ಸತೀಶ್ ಕೆ., ರಾಘವೇಂದ್ರ ಕಿಣಿ, ಮಂಜುನಾಥ್, ಬಿಎಸ್ ಕುಲಾಲ್, ವೀಣಾ ವಿನೋದ್
ಪ್ರಸಾದ್ ಆಯ್ಕೆಯಾದರು.











